ಶ್ರೀರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಭೂಮಿ ಪೂಜೆ

ಮಂಗಳವಾರ, 4 ಆಗಸ್ಟ್ 2020 (22:06 IST)

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಶ್ರೀರಾಮಮಂದಿರ ನಿರ್ಮಾಣದ ಕೆಲಸ ಕೋಟ್ಯಂತರ ಜನರ ಆಶಯ ಹಾಗೂ ಪ್ರಾರ್ಥನೆಯಾಗಿದ್ದು, ಅದು ಫಲ ಕೊಡುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ರಾಮಭಕ್ತರು ಎದುರು ನೋಡುತ್ತಿದ್ದ ಸುಂದರ ಕ್ಷಣಗಳು ಬಂದಿದ್ದು, ನಾಗಾ ಸಾಧುಗಳು, ಪ್ರಮುಖ ಸ್ವಾಮೀಜಿಗಳು, ಪ್ರಮುಖರು ಭೂಮಿ ಪೂಜೆ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ