ನನ್ನ ಹೆಂಡತಿ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಎಂದು ಬೇಡಿರುವ ಸಂಜು ಬಾಬ

ಶುಕ್ರವಾರ, 24 ಜನವರಿ 2014 (09:21 IST)
PR
ನಟ ಸಂಜಯ್ ದತ್ ಅವರ ಪತ್ನಿಯು ತೀವ್ರವಾದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ಸುಧಾರಿಸಲಿ ಎನ್ನುವ ಆಶಯದಿಂದ ಅವರು ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಅವರ ಪತ್ನಿ ಲೀವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರನ್ನು ಈ ತಿಂಗಳ ಆರಂಭದ ದಿನಗಳಲ್ಲಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಯಿತು. ಅವರ ಲೀವರ್ ಮತ್ತು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆ ಮಾಡಲು ಆಸ್ಪತ್ರೆಗೆ ದಾಖಲಿಸಲಾಯಿತು.

ದತ್ ತಮ್ಮ ಪತ್ನಿಯ ಅನಾರೋಗ್ಯದಿಂದ ಅತ್ಯಂತ ದುಃಖಿತರಾಗಿದ್ದಾರೆ. ಇತ್ತೀಚಿಗೆ ಅವರು ದಾದರಿನಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಮತ್ತು ಸಯ್ಯದ್ ಹಾಜಿ ಅಬ್ದುಲ್ ರೆಹಮಾನ್ ಶಾಹ್ ಬಾಬಾ ದರ್ಗಾಕ್ಕೂ ಸಹ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಬಂದಿದ್ದರು. ಮುಂಬೈ ಸರಣಿ ಸ್ಫೋಟದ ಅಪರಾಧದಲ್ಲಿ ಸಂಜು ಬಾಬ ಅವರಿಗೆ ಜೈಲುಶಿಕ್ಷೆ ಆಗಿದೆ. ಅವರು ಪುಣೆಯ ಯರವಾಡ ಜೈಲಿನಲ್ಲಿ ಬಂಧಿಯಾಗಿದ್ದು, ತಮ್ಮ ಪತ್ನಿಯ ಅನಾರೋಗ್ಯದಿಂದ ಪೆರೋಲ್ ಮೇಲೆ ಹೊರಗೆ ಬಂದಿದ್ದಾರೆ. ನನ್ನ ಪತ್ನಿಗೆ ಲಿವರ್ನಲ್ಲಿ ದುರ್ಮಾಂಸ ಬೆಳೆದಿದೆ.

ನನ್ನ ಕುಟುಂಬ ದಲ್ಲ್ಲಿ ಅನೇಕ ಸಾವುಗಳು ಕ್ಯಾನ್ಸರ್ ಕಾರಣದಿಂದ ಆಗಿದೆ. ಈಗ ನನ್ನ ಪತ್ನಿಗೂ ಸಹ ಕ್ಯಾನ್ಸರ್ ಬಾಧಿಸುತ್ತಿದೆ, ದಯಮಾಡಿ ಆಕೆಗೆ ಜೀವ ಉಳಿಸುವಂತೆ ದೇವರಲ್ಲಿ ಪ್ರಾರ್ಥಿಸಿ ಎಂದು ತಮ್ಮ ಅಭಿಮಾನಿಗಳಿಗೆ ಕೇಳಿದ್ದಾರೆ ಸಂಜು ಬಾಬ.

ವೆಬ್ದುನಿಯಾವನ್ನು ಓದಿ