ನಾನಿನ್ನು ಸಿಂಗಲ್ ಸಂಗಾತಿಗಾಗಿ ಕಾಯುತ್ತಿದ್ದೇನೆ ಅಂದಿದ್ದಾರೆ ರಣವೀರ್ ಕಪೂರ್ !

ಶನಿವಾರ, 8 ಫೆಬ್ರವರಿ 2014 (09:56 IST)
PR
ದೀಪಿಕಾ ಬಗ್ಗೆ ನನ್ನ ಬದುಕಿನಲ್ಲಿ ವಿಶೇಷ ಸ್ಥಾನ ಇದೆ.ನಾನು ಅತಿ ಹೆಚ್ಚು ಗೌರವಿಸುವ ಮತ್ತು ಆರಾಧಿಸುವ ವ್ಯಕ್ತಿಗಳಲ್ಲಿ ಆಕೆ ಸಹ ಒಬ್ಬರು. ಆಕೆಯ ಆಪ್ತನಾಗಿ ನಾನು ಇದ್ದೇನೆ. ಆಕೆ ನಾನು ಕಂಡ ಅತ್ಯದ್ಭುತವಾದ ವ್ಯಕ್ತಿ. ಆಕೆ ಅಂದರೆ ನನಗೆ ಹೇಳಲಾಗದಷ್ಟು ಮತ್ತು ವರ್ಣಿಸಲಾಗದಷ್ಟು ಆರಾಧನೆ ಇದೆ ಎಂದು ನಟ ರಣವೀರ್ ಸಿಂಗ್ ದೀಪಿಕಾ ಪಡುಕೋಣೆ ಗುಣಗಾನ ಮಾಡಿದ್ದಾರೆ. ಆಕೆಯೊಂದಿಗೆ ಮಾತ್ರ ನಾನು ಓಡಾಡುತ್ತೇನೆ ಎನ್ನುವುದು ಸುಳ್ಳು. ಆಕೆ ಮಾತ್ರವಲ್ಲ ಇನ್ನು ಹಲವಾರು ಜನರ ಜೊತೆ ನಾನು ಓಡಾಡುತ್ತೇನೆ. ನನ್ನ ಮತ್ತು ದೀಪಿಕಾ ನಡುವೆ ಅಂತಹ ಯಾವುದೇ ಬಗೆಯ ಸಂಬಂಧಗಳು ಇಲ್ಲ ಎನ್ನುವುದನ್ನು ಎಲ್ಲರ ಮುಂದೆ ಹೇಳಿದ್ದಾರೆ ರಣವೀರ್ .

ಆದರೆ ಬೇರೆಯವರು ದೀಪಿಕಾಳಷ್ಟು ಫೇಮಸ್ ಅಲ್ಲ, ಆದ್ದರಿಂದ ಯಾರಿಗೂ ತಿಳಿಯಲ್ಲ. ದೀಪಿಕ ನನ್ನ ಜೊತೆ ಓಡಾಡುವಾಗ ತುಂಬಾ ಆರಾಮದಾಯಕವಾಗಿ ಇರ್ತಾಳೆ. ಆಕೆಯ ಕಂಪನಿ ತನಗೆ ತುಂಬಾ ಇಷ್ಟ ಎನ್ನುವ ಮಾತು ಸಹ ಹೇಳಿದ್ದಾರೆ ರಣವೀರ್. ನನಗೆ ಸ್ನೇಹ ಅಂದ್ರೆ ಇಷ್ಟ, ನನ್ನ ಬಾಲ್ಯದ ಗೆಳೆಯ ಅರ್ಜುನ್ ಕಪೂರ್ ಅಲ್ಲದೆ ಸಹ ನಿರ್ದೇಶಕರ ಜೊತೆಗೂ ನಾನು ಓಡಾಡುತ್ತಿರುತ್ತೇನೆ. ಸದ್ಯಕ್ಕೆ ನಾನಿನ್ನು ಸಿಂಗಲ್.. ಸಂಗಾತಿಗಾಗಿ ಕಾದಿದ್ದೇನೆ ಎನ್ನುವ ಮಾತನ್ನು ಪದೇಪದೇ ಹೇಳಿದ್ದಾರೆ .

ವೆಬ್ದುನಿಯಾವನ್ನು ಓದಿ