ಶ್ರೀದೇವಿಯನ್ನು ಮದುವೆ ಆದ ಬಳಿಕ ನಮ್ಮ ಕುಟುಂಬದಲ್ಲಿ ಸಂತೋಷ ಅನ್ನೋದೇ ಕಾಣೆಯಾಯ್ತು- ಅರ್ಜುನ್ ಕಪೂರ್

ಗುರುವಾರ, 26 ಡಿಸೆಂಬರ್ 2013 (10:05 IST)
PR
ತನ್ನ ರೂಪ ಅಭಿನಯದಿಂದ ಮನೆ ಮಾತಾಗಿದ್ದ ಅತಿಲೋಕ ಸುಂದರಿ ಶ್ರೀದೇವಿ ತಮ್ಮ ಮದುವೆ ಮೂಲಕವೂ ಹೆಚ್ಚು ಸುದ್ದಿ ಆಗಿದ್ದರು. ಅವರ ಪತಿ ಬೋನಿ ಕಪೂರ್ ಶ್ರೀದೆವಿಯನ್ನು ಮದುವೆ ಆಗುವ ಮುನ್ನ ಮೊನಾ ಅವರೊಂದಿಗೆ ಮದುವೆ ಆಗಿದ್ದರು. ಅವರಿಬ್ಬರಿಗೆ ಮಕ್ಕಳು ಆಗಿತ್ತು.

ಆದರೆ ಸಿನಿನಟಿ ಶ್ರೀದೇವಿಯ ಪ್ರೀತಿಯ ಮೋಡಿಗೆ ಬಿದ್ದ ಬೋನಿ ಕಪೂರ್ ಆ ಬಳಿಕ ತನ್ನ ಮೊದಲ ಪತ್ನಿ ಮೊನಾ ಕಪೂರ್ ಗೆ ವಿಚ್ಛೇದನ ನೀಡಿ ಶ್ರೀದೇವಿಯನ್ನು ಮದುವೆ ಆದಾಗ ಈ ಸಂಗತಿ ಇಡೀ ಬಾಲಿವುಡ್ ಗೆ ಸಾಕಷ್ಟು ದಿನಗಳ ಆಹಾರವಾಗಿತ್ತು. ಅದಾಗಿ ಸಾಕಷ್ಟು ವರ್ಷಗಳೇ ಕಲಿದಿವೆ.

ಈಗ ಶ್ರೀದೇವಿ -ಬೋನಿ ಕಪೂರ್ ದಂಪತಿಗಳಿಗೆ ಮುದ್ದಾದ ಹೆಣ್ಣುಮಕ್ಕಳು. ಆದರೆ ಬೋನಿ ಕಪೂರ್ ತೆಗೆದುಕೊಂಡ ಆ ನಿರ್ಣಯದಿಂದ ಹೆಚ್ಚು ತೊಂದರೆಗೆ ಒಳಗಾದವರು ಅವರ ಮೊದಲ ಪತ್ನಿ ಮತ್ತು ಮಕ್ಕಳು. ಬೋನಿ ಕಪೂರ್ ಅವರ ಮಗ ಅರ್ಜುನ್ ಕಪೂರ್ ಗೆ ತಂದೆ ಆ ನಿರ್ಧಾರದಿಂದ ಸಾಕಷ್ಟು ಸಿಟ್ಟಿದೆ. ತುಂಬಾ ನೋವಿದೆ.

PR
ಅರ್ಜುನ್ ಕಪೂರ್ ಗೆ ತನ್ನ ಮಲ ತಾಯಿ ಶ್ರೀದೇವಿ ಬಗ್ಗೆ ಆದರ ಆಪ್ಯಾಯತೆ ಇಲ್ಲವೆಂಬ ಸುದ್ದಿ ಸಹ ಹೆಚ್ಚು ಚಾಲ್ತಿಯಲ್ಲಿದೆ ಬಿ ಟೌನ್ ನಲ್ಲಿ. ಇಷ್ಟು ವರ್ಷಗಳ ನಂತರ ಆತ ತನ್ನ ಮನದ ಮಾತುಗಳನ್ನು, ಬೇಸರವನ್ನು ಹೊರಗೆ ಹಾಕಿದ್ದಾನೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ

ಶ್ರೀದೇವಿಗಾಗಿ ತನ್ನ ತಂದೆ ತನ್ನ ತಾಯಿ ಮೊನಾ ಕಪೂರ್ ರನ್ನು ಬಿಟ್ಟು ಹೋದಾಗ ನಮಗೆ ಆಗ ಅದೆಷ್ಟು ಸಮಸ್ಯೆಗಳು ತೊಂದರೆಗಳು ಎದುರಾಯಿತೆಂದರೆ ಅವುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಶ್ರೀದೇವಿಯಿಂದ ತಮ್ಮ ಕುಟುಂಬದಲ್ಲಿ ಸಂತೋಷ ಅನ್ನೋ ಅಂಶವೇ ಮರೀಚಿಕೆ ಆಯ್ತು ಎಂದೆಲ್ಲ ಹೇಳಿದ್ದಾನೆ. ಬಹಳ ದಿನಗಳ ಬಳಿಕ ಮತ್ತೆ ಬೂದಿಯಲ್ಲಿ ಮುಚ್ಚಿದ ಕೆಂಡ ನಿಗಿನಿಗಿಸಿದೆ .. ಅದು ಯಾರನ್ನು ಸುಡುತ್ತದೆಯೋ ?

ವೆಬ್ದುನಿಯಾವನ್ನು ಓದಿ