ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಸೋಮವಾರ, 1 ಜನವರಿ 2024 (13:05 IST)
Photo Courtesy: Twitter
ಬೆಂಗಳೂರು: ನಟ ಶಿವರಾಜ್ ಕುಮಾರ್ 131 ನೇ ಸಿನಿಮಾ ಘೋಷಣೆಯಾಗಿದ್ದು ದೊಡ್ಮನೆ-ತೂಗುದೀಪ ಶ್ರೀನಿವಾಸ್ ಮನೆ ಈ ಸಿನಿಮಾಗಾಗಿ ಮತ್ತೊಮ್ಮೆ ಒಂದಾಗ್ತಿದೆ.

ಡಾ.ರಾಜ್ ಕುಟುಂಬಕ್ಕೂ ತೂಗುದೀಪ ಶ್ರೀನಿವಾಸ್ ಕುಟುಂಬಕ್ಕೂ ಹಳೆಯ ಕಾಲದ ನಂಟಿದೆ. ಡಾ.ರಾಜ್ ಅನೇಕ ಸಿನಿಮಾಗಳಲ್ಲಿ ತೂಗುದೀಪ ಶ್ರೀನಿವಾಸ್ ನಟಿಸಿದ್ದರು.

ಇದೇ ಕಾರಣಕ್ಕೆ ಅವರ ಪುತ್ರ, ನಟ ದರ್ಶನ್ ತೂಗುದೀಪ ಕೂಡಾ ದೊಡ್ಮನೆ ಎಂದರೆ ವಿಶೇಷ ಗೌರವ ಕೊಡುತ್ತಲೇ ಬಂದಿದ್ದಾರೆ. ಇದೀಗ ದೊಡ್ಮನೆ ಮಗ ಶಿವರಾಜ್ ಕುಮಾರ್ ಸಿನಿಮಾಗೆ ತೂಗುದೀಪ ಶ್ರೀನಿವಾಸ್ ಪುತ್ರ ದಿನಕರ್ ತೂಗುದೀಪ ನಿರ್ದೇಶನ ಮಾಡುತ್ತಿರುವ ಸುದ್ದಿ ಬಂದಿದೆ.

ಕಿಲ್ಲಿಂಗ್ ವೀರಪ್ಪನ್ ಖ್ಯಾತಿಯ ಬಿ.ಎಸ್.ಸುದೀಂದ್ರ, ಆರ್.ಕೇಶವ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಪ್ರಿಯದರ್ಶಿನಿ ರಾಮರೆಡ್ಡಿ ಈ ಸಿನಿಮಾಗೆ ಕತೆ ಬರೆದಿದ್ದಾರೆ. ದಿನಕರ್ ತೂಗುದೀಪ ಈ ಮೊದಲು ದರ್ಶನ್ ಗೆ ಸಾರಥಿಯಂತಹ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕರು. ಅವರೀಗ ಮತ್ತೆ ನಿರ್ದೇಶನದ ಕ್ಯಾಪ್ ತೊಟ್ಟು ಬರುತ್ತಿದ್ದಾರೆ. ಅದರಲ್ಲೂ ಅವರ ಮತ್ತು ಶಿವಣ್ಣ ಕಾಂಬಿನೇಷನ್ ಸಿನಿಮಾ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ