ಅನುಷ್ಕ ಮಾಡಲು ಹೊರಟಿರುವ ಸಾಹಸ ಕಥೆ ಇಲ್ಲಿದೆ !

ಬುಧವಾರ, 16 ಏಪ್ರಿಲ್ 2014 (09:21 IST)
PR
ಟಾಲಿವುಡ್ ನಲ್ಲಿ ನಂಬರ್ ಒನ್ ಪೊಸಿಶನ್ ನಲ್ಲಿ ಇದ್ದಾಳೆ ನಟಿ ಅನುಷ್ಕ . ಆಕೆಯ ಗಮನ ಈಗ ಕಾಲಿವುಡ್ ಕಡೆಗೆ. ಆದರೆ ಈ ಓಟದಲ್ಲಿ ಮೊದಲ ಸ್ಥಾನದಲ್ಲಿ ಇದ್ದಾಳೆ ಸಮಂತ . ಸದ್ಯಕ್ಕೆ ಅನುಷ್ಕ ಅಜಯ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ.

ಆ ಚಿತ್ರಕ್ಕೆ ಸಂಬಂಧ ಪಟ್ಟಂತೆ ಆಕೆ ತೆಗೆದು ಕೊಂಡ ನಿರ್ಧಾರ ಅಜಿತ್ ಮತ್ತು ನಿರ್ದೇಶಕ ಗೌತಮ್ ಮೆನನ್ ಅವರನ್ನು ಆಶ್ಚರ್ಯಗೊಳಿಸಿದೆಯಂತೆ. ಅವರಿಷ್ಟು ಆಶ್ಚರ್ಯ ಪಡಲು ಕಾರಣ ಏನಂದರೆ ಈ ಚಿತ್ರದಲ್ಲಿ ಅನುಷ್ಕ ತಾನೇ ತನ್ನ ಕಂಠದಾನ ಮಾಡುತ್ತಿದ್ದಾಳೆ ನಟಿಸಿರುವ ಪಾತ್ರಕ್ಕೆ.

PR
ಆರಂಭದಲ್ಲಿ ಆಕೆಯ ಈ ನಿರ್ಧಾರಕ್ಕೆ ಹೌಹಾರಿದ ನಿರ್ದೇಶಕ ಮತ್ತು ನಟ ಅಜಿತ್ ಬೇಡಮ್ಮ ನೀ ಯಾಕೆ ತೊಂದ್ರೆ ತಗೊತೀಯ ಅಂದರಂತೆ. ಆದರೆ ಆಕೆ ನಾನು ಮಾಡಿ ತೋರಿಸುತ್ತೇನೆ ಎಂದು ಹೇಳಿದ ಕಾರಣ , ಅದೂ ಆತ್ಮವಿಶ್ವಾಸದಿಂದ !

ಇದಕ್ಕೆ ಅಂತಿಮವಾಗಿ ಅಜಿತ್ ಓಕೆ ಎಂದು ಹೇಳಿದ್ದಾರಂತೆ. ಅಜಿತ್ ಚಿತ್ರದಲ್ಲಿ ನಟಿಸಿದ ಬಳಿಕ ಅನುಷ್ಕ ರಜನಿಕಾಂತ್ ಚಿತ್ರದಲ್ಲಿ ನಟಿಸಲು ಸಿದ್ಧ ಆಗುತ್ತಿದ್ದಾಳೆ. ರಜನಿ ಅವರ ಮುಂದಿನ ಚಿತ್ರ ರಾಣ ದಲ್ಲಿ ಈಕೆಗೆ ನಾಯಕಿ . ಈ ಚಿತ್ರವನ್ನು ಕೆ. ಎಸ್. ರವಿಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ