ಇದೀಗ ಮತ್ತೊಂದು ಕನ್ನಡ ಸಿನಿಮಾದಲ್ಲೂ ನೀನಾಸಂ ಸತೀಶ್ ಹಾಗೂ ಶೃತಿ ಹರಿಹರನ್ ಜೊತೆಯಾಗಿ ಅಭಿನಯಿಸಲು ರೆಡಿಯಾಗಿದ್ದಾರೆ. ಈ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಒಲವೇ ಮಂದಾರ,ಬುಲೆಟ್ ಬಸ್ಯಾ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಜಯತೀರ್ಥ ಲೂಸಿಯಾ ಜೋಡಿಯನ್ನು ಮತ್ತೆ ಒಂದು ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಬ್ಯೂಟಿಫುಲ್ ಮನಸ್ಸುಗಳು ಅಂತಾ ಹೆಸರಿಡಲಾಗಿದೆ.ಇನ್ನು ಶೃತಿ ಹಾಗೂ ನೀನಾಸಂ ಸತೀಶ್ ಎರಡನೇ ಬಾರಿ ಜೊತೆಯಾಗಿ ಅಭಿನಯಿಸುತ್ತಿರುವ ಈ ಸಿನಿಮಾ ಖಂಡಿತವಾಗಿಯೂ ಯಶಸ್ಸು ಕಾಣುತ್ತೆ ಅನ್ನೋ ನಿರ್ದೇಶಕ ಜಯತೀರ್ಥ ಅವರು ಹೇಳಿದ್ದಾರೆ.