ಮತ್ತೆ 3 ಕೋಟಿ ರೂ. ದೇಣಿಗೆ ನೀಡಿದ ಅಕ್ಷಯ್ ಕುಮಾರ್

ಶುಕ್ರವಾರ, 10 ಏಪ್ರಿಲ್ 2020 (11:28 IST)
ಮುಂಬೈ: ಮೊನ್ನೆಯಷ್ಟೇ ಪ್ರಧಾನಿ ಪರಿಹಾರ ನಿಧಿಗೆ 25 ಕೋಟಿ ರೂ. ಪರಿಹಾರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈಗ ಮತ್ತೆ 3 ಕೋಟಿ ರೂ. ದೇಣಿಗೆ ನೀಡಿದ್ದಾರೆ.


ಈ ಬಾರಿ ಅಕ್ಷಯ್ ದೇಣಿಗೆ ನೀಡಿರುವುದು ಮುಂಬೈ ಮಹಾನಗರ ಪಾಲಿಕೆಗೆ. ಈ ಪರಿಹಾರ ಹಣವನ್ನು ಮಾಸ್ಕ್ ತಯಾರಿಕೆಗೆ ಮತ್ತು ಕೊರೋನಾ ಟೆಸ್ಟ್ ಕಿಟ್ ಖರೀದಿಗೆ ಬಳಸುವುದಾಗಿ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.

ಇದಲ್ಲದೆ ಸ್ಥಳೀಯರಿಗೂ ದಿನನಿತ್ಯದ ಅಗತ್ಯ ವಸ್ತುಗಳನ್ನು ನೀಡುವುದು, ಊಟ ಒದಗಿಸುವುದು ಇತ್ಯಾದಿ ಮೂಲಕ ಅಕ್ಷಯ್ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ