ಅಷ್ಟಕ್ಕೂ ಆಗಿದ್ದು ಏನಪ್ಪಾ ಅಂದ್ರೆ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಅಕ್ಷಯ್ ಕುಮಾರ್ ಅವರನ್ನು ನೋಡಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ರು. ಈ ವೇಳೆ ನೂಕಾಟ ತಳ್ಳಾಟ ಸಂಭವಿಸಿತ್ತು. ಇದನ್ನು ಸಂಭಾಳಿಸೋದಕ್ಕೆ ಅಕ್ಷಯ್ ಕುಮಾರ್ ಅವರ ಬಾಡಿ ಗಾರ್ಡ್ ಯತ್ನಿಸಿದ್ದಾರೆ.ಆದ್ರೆ ಬಾಡಿಗಾರ್ಡ್ ಅವರಿಗೆ ಪರಿಸ್ಥಿತಿ ನಿಭಾಯಿಸಲು ಅಸಾಧ್ಯವಾದಾಗ ಅವರು ಅಭಿಮಾನಿಯೊಬ್ಬನ ಮೇಲೆ ಕೈ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಈ ಘಟನೆಯಿಂದಾಗಿ ಅಕ್ಷಯ್ ಕುಮಾರ್ ಅವರು ಕೂಡ ನೊಂದುಕೊಂಡಿದ್ದರು. ಹಾಗಾಗಿ ಅವರು ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ.