ಅಮಿತಾಬ್ ಬಚ್ಚನ್ ಉಯಿಲು ಬಯಲು!

ಗುರುವಾರ, 2 ಮಾರ್ಚ್ 2017 (10:35 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸಾಕಷ್ಟು ಹಣ, ಆಸ್ತಿ ಸಂಪಾದಿಸಿದ್ದಾರೆ. ತಮ್ಮ ನಂತರ ಈ ಸೊತ್ತು ಯಾರ ಪಾಲಾಗಬೇಕು ಎಂಬುದನ್ನೂ ಅವರು ಈಗಲೇ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.


ತನ್ನ ಮರಣಾನಂತರ ತನ್ನ ಸೊತ್ತನ್ನು ಪುತ್ರ ಅಭಿಷೇಕ್ ಬಚ್ಚನ್ ಮತ್ತು ಪುತ್ರಿ ಶ್ವೇತಾ ನಂದಾ ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಅಮಿತಾಬ್ ಹೇಳಿಕೊಂಡಿದ್ದಾರೆ. ಮಹಿಳಾ ದಿನಾಚರಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಲಿಂಗ ಸಮಾನತೆ ಬಗ್ಗೆ ಧ್ವನಿಯೆತ್ತಿರುವ ಅಮಿತಾಬ್ “ನನ್ನ ಮರಣಾನಂತರ ನಾನು ಬಿಟ್ಟು ಹೋಗುವ ಸೊತ್ತಿಗೆ ನನ್ನ ಮಗ ಹಾಗೂ ಮಗಳು ಇಬ್ಬರೂ ಸಮಾನ ಪಾಲುದಾರರು” ಎಂದು ಬಿತ್ತಿಫಲಕ ಬರೆದು ತೆಗೆಸಿಕೊಂಡ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ ಹಾಕಿಕೊಂಡಿದ್ದಾರೆ.

ಅಮಿತಾಬ್ ಈ ಮೂಲಕ ಎಲ್ಲಾ ಪೋಷಕರಿಗೂ ಲಿಂಗ ತಾರತಮ್ಯ ಮಾಡದಂತೆ ಮನವಿ ಮಾಡಿದ್ದಾರೆ. ಅಲ್ಲದೆ ತಮ್ಮ ಮೊಮ್ಮಕ್ಕಳಾದ ಆರಾಧ್ಯ ಬಚ್ಚನ್ ಮತ್ತು ನವ್ಯಾ ನಂದಾ ಅವರಿಗೂ ತಮ್ಮ ಬ್ಲಾಗ್ ನಲ್ಲಿ ಪತ್ರ ಬರೆದು ಕಿವಿ ಮಾತು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ