ಹೈದರಾಬಾದ್ ನಲ್ಲಿ ರುದ್ರಮ್ಮ ಚಿನ್ನದ ಆಭರಣಗಳ ಕಳುವು !

ಸೋಮವಾರ, 21 ಜುಲೈ 2014 (12:36 IST)
ಬೆಂಗಳೂರಿನಿಂದ ತಂದಿದ್ದ ಒಂದೂವರೆ ಕಿಲೋಗಳಷ್ಟು ಚಿನ್ನದ ಆಭರಣ ಕಳುವಾಗಿದೆ. ಈ ಘಟನೆ ನಡೆದಿರುವುದು  ಬೇರೆ ಎಲ್ಲೂ ಅಲ್ಲ, ರುದ್ರಮ ದೇವಿ ಚಿತ್ರದ ಶೂಟಿಂಗ್ ಜಾಗದಲ್ಲಿ. ರುದ್ರಮದೇವಿ ಆಂಧ್ರಪ್ರದೇಶ ಆಳಿದ ವೀರರಾಣಿಯ ಕಥೆ ಆಗಿದೆ. ಅರುಂಧತಿ ಖ್ಯಾತಿಯ ರುದ್ರಮದೇವಿ ಪಾತ್ರದಲ್ಲಿ ನಟಿ ಅನುಷ್ಕ ಶೆಟ್ಟಿ ನಟಿಸುತ್ತಾ ಇದ್ದಾಳೆ.


ಹೈದರಾಬಾದ್ ಗೆ ತಂದಿದ್ದ ಈ ಆಭರಣಗಳು  ನಾನಕ್ ರಾಮ್ ಗುಡ್ ಎನ್ನುವ  ಕಡೆ ಇರುವ ರಾಮಾನಾಯಿಡು ಸ್ಟುಡಿಯೋದಲ್ಲಿ  ಈ ಕಳ್ಳತನ ನಡೆದಿದೆ. 



ಶನಿವಾರ ಶೂಟಿಂಗ್ ಸಮಯದಲ್ಲಿ ಈ ಆಭರಣಗಳು ಮಾಯ ಆಗಿರುವ ಸಂಗತಿ ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದ ಸಿನಿಮಾ ಯೂನಿಟ್ ಸ್ಥಳೀಯ ಗಚ್ಚಿ ಬೌಲಿ ಪೊಲೀಸ್ ಠಾಣೆ ಯಲ್ಲಿ  ದೂರು ನೀಡಲಾಗಿದ್ದು, ಅಲ್ಲಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಈ ಆಭರಣಗಳ ಬೆಲೆ ಸುಮಾರು 45  ಲಕ್ಷಗಳಾಗಿವೆ. ಆ ಸಿನಿಮಾದಲ್ಲಿ ಅನುಷ್ಕಾ ರುದ್ರಮದೇವಿ ಟೈಟಲ್ ರೋಲ್ ನಲ್ಲಿ ನಟಿಸುತ್ತಾ ಇದ್ದಾಳೆ. ವಿಭಿನ್ನ ರೀತಿಯ ಚಿತ್ರಗಳನ್ನು ನೀಡುವ ಗುಣಶೇಖರ್  ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ನಮ್ಮ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ    ಸ್ಟಿರಿಯೋ ಸ್ಕೋಪಿಕ್ ತ್ರಿಡಿಯಲ್ಲಿ ನಿರ್ಮಿತಗೊಂಡಿದೆ.  ಈ ಮುಖಾಂತರವು ಸಹ ವಿಶೇಷತೆ ಪಡೆದಿದೆ  ಸಿನಿಮಾ ! 

ವೆಬ್ದುನಿಯಾವನ್ನು ಓದಿ