ಬಾಂಬೇ ವೆಲ್ವೆಟ್ ಸಿನಿಮಾದ ಬಳಿಕ ಅಭಿನಯಸಲು ಯಾರು ನನಗೆ ಆಫರ್ ನೀಡಲಿಲ್ಲ- ಕರಣ್ ಜೋಹರ್

ಶನಿವಾರ, 13 ಫೆಬ್ರವರಿ 2016 (12:32 IST)
ಬಾಲಿವುಡ್ ನ ಮಲ್ಟಿ ಟ್ಯಾಲೆಂಟ್ ಗಳಲ್ಲಿ ಒಬ್ಬರು ನಟ ನಿರ್ದೇಶಕ ಹಾಗೇ ನಿರ್ಮಾಪಕರಾದ ಕರಣ್ ಜೋಹರ್. ಕ್ಯಾಮೆರಾ ಮುಂದೆ ನಟರಿಂದ ಯಾವ ರೀತಿ ಅಭಿನಯ ಹೊರ ತೆಗೆಯಬೇಕು ಅನ್ನೋದು ಕರಣ್ ಗೆ ಗೊತ್ತು. ಹಾಗೇ ಸಿನಿಮಾವನ್ನು ಯಾವ ರೀತಿ ನಿರ್ಮಾಣ ಮಾಡಿದ್ರೆ ಯಶಸ್ಸು ಬರುತ್ತೆ ಅನ್ನೋದು ಕರಣ್ ಗೆ ತಿಳಿದಿದೆ. ಅಭಿನಯೋದರಲ್ಲೂ ಕರಣ್ ಪಂಟ್ರು.ಆದ್ರೆ ಇತ್ತೀಚೆಗೆ ಕರಣ್ ಅಭಿನಯದಿಂದ ದೂರ ಉಳಿದಿದ್ದಾರೆ. ಯಾಕೆ ಅನ್ನೋದಕ್ಕೆ ಅವರೇ ಕಾರಣ ಕೂಡ ನೀಡಿದ್ದಾರೆ.
 
ಹೌದು...ಕರಣ್ ಬಾಲಿವುಡ್ ನಲ್ಲಿ ಕೊನೆಯದಾಗಿ ಬಣ್ಣ ಹಚ್ಚಿದ ಸಿನಿಮಾ ಬಾಂಬೆ ವೆಲ್ವೆಟ್.ಅನುರಾಗ್ ಕಶ್ಯಪ್ ನಿರ್ದೇಶನದ ಆ ಸಿನಿಮಾದಲ್ಲಿ ಕರಣ್ ವಿಲನ್ ಆಗಿ ಕಾಣಿಸಿಕೊಂಡಿದ್ದರು.ಆದ್ರೆ ಅದರ ಬಳಿಕ ಕರಣ್ ಅವರು ಯಾವುದೇ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ.ಆದ್ರೀಗ ತಾನು ಯಾಕೆ ಅಭಿನಯಿಸುತ್ತಿರಲಿಲ್ಲ ಅನ್ನೋದನ್ನು ಕರಣ್ ಹೇಳಿದ್ದಾರೆ. ಬಾಂಬೆ ವೆಲ್ವೆಟ್ ಸಿನಿಮಾದ ಬಳಿಕ ನನಗೆ ಯಾರು ಕೂಡ ಅಭಿನಯಿಸೋದಕ್ಕೆ ಆಫರ್ ನೀಡಿರಲಿಲ್ಲ.ಹಾಗಾಗಿ ನಾನು ಅಭಿನಯಿಸಲಿಲ್ಲ ಅಂತಾ ಅವರು ಹೇಳಿದ್ದಾರೆ.
 
ಇನ್ನು ಅಭಿನಯಿದಿಂದ ದೂರ ಉಳಿದಿದರು ಕರಣ್ ಸಿನಿಮಾ ನಿರ್ದೇಶನ ಹಾಗೇ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಕರಣ್ ಜೋಹರ್ ನಿರ್ದೇಶನದ ಅನುಷ್ಕಾ ಶರ್ಮಾ ಹಾಗೂ ರಣ್ ಬೀರ್ ಕಪೂರ್ ಅಭಿನಯದ ಯೇ ದಿಲ್ ಹೈ ಮುಷ್ಕಿಲ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಕಪೂರ್ ಆಂಡ್ ಸನ್ಸ್ ಸಿನಿಮಾವನ್ನು ಕರಣ್ ಅವರೇ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ