ಕರ್ನಾಟಕ ಅಳಿಯ ಬಾಲಿವುಡ್ ನ ಪ್ರತಿಭಾವಂತ ನಟ ವಿವೆರ್ಕ್ ಒಬೆರಾಯ್ ಅವರಿಗೆ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ದಾದಸಾಹೇಬ್ ಫಾಲ್ಕೆ ಪ್ರಶಸಿ ದೊರಕಿದೆ. ಭಾರತೀಯ ಚಿತ್ರರಂಗದಲ್ಲೇ ಅತ್ಯುನ್ನತ ಪುರಸ್ಕಾರ ಎನ್ನುವಂತಹ ಹೆಗ್ಗಳಿಕೆ ಪಡೆದಿರುವ ಈ ಪುರಸ್ಕಾರವು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಅಸಮಾನ್ಯ ಪ್ರತಿಭೆಗಳೆಗೆ ನೀಡಲಾಗುತ್ತದೆ. ಕರ್ನಾಟಕದಲ್ಲಿ ಡಾ. ರಾಜ್ ಕುಮಾರ್ ಅವರಿಗೂ ದೊರಕಿತ್ತು.
ಎಲ್ಲರಿಗೂ ಗೊತ್ತಿರುವಂತೆ ವಿವೇಕ್ ಒಬೆರಾಯ್ ಕೇವಲ ಸಿನಿ ನಟನೆಯಲ್ಲಿ ಮಾತ್ರವಲ್ಲ ಸಮಾಜಮುಖಿ ವ್ಯಕ್ತಿತ್ವ ಸಹಿತ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಒಟ್ಟು ಮಾಡಿ ಜ್ಯೂರಿಗಳು ವಿವೇಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ಪ್ರಶಸ್ತಿಯನ್ನು ದಾದಾ ಸಾಹೇಬ್ ಫಾಲ್ಕೆ ಫಿಲಿಂ ಫೌಂಡೇಶನ್ 2015 ರ ಫಾಲ್ಕೆ ಪ್ರಶಸ್ತಿ ನೀಡಲು ಸಿದ್ಧವಾಗಿದೆ. ಆ ಕಮಿಟಿಯ ಎಲ್ಲಾ ಸದಸ್ಯರು ಸರ್ವಾನುಮತದಿಂದ ಸಮ್ಮತಿಸಿ ನೀಡಿದ್ದಾರೆ.
ಈ ಸಂಗತಿಯಿಂದ ಪುಳಕಿತರಾಗಿರುವ ವಿವೇಕ್ ಇಂತಹ ಅಪರೂಪದ ಗೌರವ ದೊರಕಿರುವುದಕ್ಕೆ ಹೆಚ್ಚು ವಿನಮ್ರನಾಗಿದ್ದೇನೆ. ನನ್ನ ಬದುಕಿನಲ್ಲಿ ಮೊತ್ತ ಮೊದಲ ಬಾರಿಗೆ ಇಂತಹ ಅತ್ಯದ್ಭುತವಾದ ಪ್ರಶಸ್ತಿ ಸ್ವೀಕರಿಸಿರುವುದು ಎನ್ನುವ ಮಾತನ್ನು ಹೇಳಿದ್ದಾರೆ. ಅಲ್ಲದೆ ತನಗೆ ಪ್ರೋತ್ಸಾಹ ನೀಡಿದ್ದಕ್ಕೆ ಧನ್ಯವಾದಗಳು ಎಂದೂ ಸಹಿತ ಹೇಳಿದ್ದಾರೆ. ಇನ್ನು ಮುಂದೆ ನಾನು ಮತ್ತಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಿದ್ಧನಾಗುತ್ತೇನೆ ಎಂದಿದ್ದಾರೆ. ಈಗ ಅವರು ಯಶ್ ರಾಜ್ ಫಿಲಿಮ್ಸ್ ಬ್ಯಾಂಕ್ ಚೋರ್ ಮತ್ತು ಗ್ರೇಟ್ ಗ್ರಾಂಡ್ ಮಸ್ತಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಪತ್ರಿಕೆಯ ಕಡೆಯಿಂದ ಶುಭಕಾಮನೆಗಳು.