ಮಾತಿನ ಭಾಗ ಪೂರ್ಣಗೊಳಿಸಿದ ದರ್ಶನ್ ಐರಾವತ

ಶುಕ್ರವಾರ, 17 ಏಪ್ರಿಲ್ 2015 (10:16 IST)
ಚಾಲೆಂಜಿಂಗ್  ಸ್ಟಾರ್ ದರ್ಶನ್ ಅವರ ಅಭಿನಯದ  ಹೊಚ್ಚ ಹೊಸ ಚಿತ್ರ ಐರಾವತ. ಸಂದೇಶ್ ಕಂಬೈನ್ಸ್ ಅಡಿಯಲ್ಲಿ ಸಂದೇಶ್ ನಾಗರಾಜ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮಾತಿನ ಭಾಗ ಸಂಪೂರ್ಣವಾಗಿದೆ. ಈಗ ಈ ಚಿತ್ರದ ನಾಲ್ಕು ಹಾಡುಗಳ ಚಿತ್ರೀಕರಣವನ್ನು  ಆಸ್ಟ್ರೇಲಿಯ ಹಾಗೂ ಹುಬ್ಬಳ್ಳಿಯಲ್ಲಿ ಮಾಡಲಾಗುತ್ತದೆ ಎಂದು ನಿರ್ದೇಶಕ ಎ ಪಿ ಅರ್ಜುನ್  ಹೇಳಿದ್ದಾರೆ.  
 

 
2012ರ ಮಿಸ್ ಇಂಡಿಯ ಆಗಿದ್ದ ಊರ್ವಶಿ ರೌತೆಲ ಈ ಚಿತ್ರದ ನಾಯಕಿಯಾಗಿದ್ದಾಳೆ. ಈಕೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲೂ ಸಹಿತ ಭಾಗವಹಿಸಿದ್ದಳು. ಈಗ ಈಕೆ ಕನ್ನಡ ಚಿತ್ರರಂಗದ  ಸ್ಟಾರ್ ನಟ ದರ್ಶನ್ ಅವರ ಜೊತೆ ಅಭಿನಯಿಸುವ ಅವಕಾಶ ಪಡೆದು ಕನ್ನಡಿಗರನ್ನು ರಂಜಿಸಲು ಸಿದ್ಧವಾಗಿದ್ದಾಳೆ.  
 
ಪ್ರಕಾಶ್ ರಾಜ್ ಅವರು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಸಾಧುಕೋಕಿಲ, ಅವಿನಾಶ್, ಅಶೋಕ್  ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಅರ್ಜುನ್ ಅವರೇ ಬರೆದಿದ್ದಾರೆ. ದೀಪು ಎಸ್  ಕುಮಾರ್  ಸಂಕಲನ, ಶೇಖರ್ ಚಂದ್ರ ಕ್ಯಾಮರ, ಈಶ್ವರ್ ಚಂದ್ರ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. 

ವೆಬ್ದುನಿಯಾವನ್ನು ಓದಿ