ಗಣೇಶನ ಆರ್ಶೀವಾದ ಪಡೆದ ದೀಪಿಕಾ ಪಡುಕೋಣೆ

ಶುಕ್ರವಾರ, 27 ನವೆಂಬರ್ 2015 (10:53 IST)
ದೀಪಿಕಾ ಪಡುಕೋಣೆ ಹಾಗೂ ರಣ್ ಬೀರ್ ಕಪೂರ್ ಅಭಿನಯದ ತಮಾಷಾ ಸಿನಿಮಾ ಇವತ್ತು ರಿಲೀಸ್ ಆಗುತ್ತಿದೆ. ತಾರೆಯರು ತಮ್ಮ ತಮ್ಮ ಸಿನಿಮಾಗಳು ರಿಲೀಸ್ ಆಗುವಾಗ ಅವರವರ ನೆಚ್ಚಿನ ದೇವರುಗಳ ದರ್ಶನ ಪಡೆಯೋದು ಮಾಮೂಲಿ. ದಿಪ್ಪಿ ಕೂಡ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣಲಿ ಅಂತಾ ಗಣೇಶನ ದರ್ಶನ ಪಡೆದ್ರಂತೆ.

ತಾಯಿ ಉಜ್ಜಲ ಪಡುಕೋಣೆ ಜೊತೆ ಮುಂಬೈ ಪ್ರಸಿದ್ಧ ದೇಗುಲ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ರು.ಪಕ್ಕಾ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ ದೀಪಿಕಾ ಪಡುಕೋಣೆ ಕೆಲ ಹೊತ್ತು ದೇಗುಲದಲ್ಲಿ ಕಳೆದ್ರಂತೆ. ಪ್ರತಿ ಬಾರಿ ಅವರ ಸಿನಿಮಾ ರಿಲೀಸ್ ಆಗುವ ಮುನ್ನ ದೀಪಿಕಾ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರಂತೆ.ಆದ್ರೆ ಗಣೇಶ ಈ ಬಾರಿ ದೀಪಿಕಾಗೆ ಎಷ್ಟರಮಟ್ಟಿಗೆ ಯಶಸ್ಸು ತಂದು ಕೊಡುತ್ತಾನೆ ಅನ್ನೋದಕ್ಕೆ ಉತ್ತರ ಇವತ್ತು ಸಿಗಲಿದೆ.
  
ತಮಾಷಾ ಸಿನಿಮಾ ಪ್ರೇಮಕಥಾಧಾರಿತ ಸಿನಿಮಾವಾಗಿದ್ದು, ಸಿನಿಮಾದಲ್ಲಿ ತಾರಾ ಎಂಬ ಪಾತ್ರವನ್ನು ದೀಪಿಕಾ ನಿರ್ವಹಿಸಿದ್ದಾರೆ, ರಾಧಾಕೃಷ್ಣ ಕಥೆಯಿಂದ ಸ್ಫೂರ್ತಿ ಪಡೆದು ಇಮ್ತಿಯಾಜ್ ಅಲಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರಂತೆ.

ವೆಬ್ದುನಿಯಾವನ್ನು ಓದಿ