ಅದಾದ ಬಳಿಕ ಅದೇ ಸುದ್ದಿ ಸಾಕಷ್ಟು ಪ್ರಚಾರ ಗಳಿಸಿತ್ತು. ತನಗೆ ತಪ್ಪಿ ಹೋದ ಅವಕಾಶದ ಬಗ್ಗೆ ಪ್ರಣೀತ ಚಿಂತೆ ಮಾಡದೆ ಬಂದ ಸವಾಲು ಎದುರಿಸಿ ಹೊಸ ಅವಕಾಶದತ್ತ ಗಮನ ಕೇಂದ್ರೀಕರಿಸಿದ್ದಳು. ಈಗ ಆಕೆ ಕನಸು ನನಸಾಗಿದೆ. ಪ್ರಣೀತ ಬಯಸಿದೆ ಇರುವ ಭಾಗ್ಯ ಕೈಗೂಡಿದೆ. ಕಾಲಿವುಡ್ ನಲ್ಲಿ ಆಕೆಗೆ ನಟಿಸಲು ಅವಕಾಶ ಸಿಕ್ಕಿದ್ದು, ಆ ಚಿತ್ರದಲ್ಲಿ ಸೂರ್ಯ ಹೀರೋ ಆಗಿದ್ದಾರೆ. ಮಾಸ್ ಎನ್ನುವ ಹೆಸರನ್ನು ಪಡೆದಿರುವ ಆ ಚಿತ್ರದಲ್ಲಿ ಈಕೆ ಹೀರೋಯಿನ್ ಆಗ್ತಾ ಇದ್ದಾಳೆ ಎನ್ನುವ ಸುದ್ದಿ ಸೀರಿಯಸ್ ಆಗಿ ಹರಡಿದೆ.
ಸದ್ಯದಲ್ಲೇ ಬಲ್ಗೇರಿಯಾದಲ್ಲಿ ನಡೆಯುವ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲು ಪ್ರಣೀತ ಹೋಗುತ್ತಿದ್ದಾಳಂತೆ. ಈ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶಿಸುತ್ತಿದ್ದು, ಇದು ಹಾರರ್ ಆಕ್ಷನ್ ಗಳ ಸಂಗಮವಾಗಿದೆ ಯಂತೆ. ಒಂದು ಬಾಗಿಲು ಮುಚ್ಚಿದರೆ ನೂರು ಬಾಗಿಲುಗಳ ಅವಕಾಶ ತೆರೆದಿರುತ್ತೆ ಎನ್ನುವುದನ್ನು ಇಂತಹ ನಿದರ್ಶನಗಳು ನಿಜ ಮಾಡುತ್ತೆ.