ಬಯಸದೆ ಬಂದ ಭಾಗ್ಯ .. ಖುಲಾಯಿಸಿತು ಪ್ರಣೀತ ಅದೃಷ್ಟ

ಶುಕ್ರವಾರ, 28 ನವೆಂಬರ್ 2014 (11:11 IST)
ತ್ರಿವಿಕ್ರಂ ಶ್ರೀನಿವಾಸ್ ಅವರ ನಿರ್ದೇಶನದ ಚಿತ್ರದಲ್ಲಿ ಅಲ್ಲೂ ಅರ್ಜುನ್ ಅವರು ಮುಖ್ಯ ಪಾತ್ರಧಾರಿ ಆಗಿದ್ದಾರೆ. ಈ ಚಿತ್ರದಲ್ಲಿ ತನಗೆ ಅವಕಾಶ ದೊರಕುತ್ತದೆ ಎಂದು ಕನ್ನಡತಿ ಪ್ರಣೀತ ಸುಭಾಷ್ ಸಾಕಷ್ಟು ಕನಸು ಕಂಡಿದ್ದಳು. ಆಕೆಯ ಆಸೆಯಂತೆ ಆ ಚಿತ್ರದಲ್ಲಿ ನಟಿಸುವ ಅವಕಾಶವು ಸಹಿತ ದೊರೆತಿತ್ತು. ವಾರದಷ್ಟು ಸಮಯ ಚಿತ್ರದ ಶೂಟಿಂಗ್ ಸಹ ಆಗಿತ್ತು. ಆದರೆ ಅದ್ಯಾಕೋ ಗೊತ್ತಿಲ್ಲ ನಿರ್ದೇಶಕರಿಗೆ ಪ್ರಣೀತ ಬೇಡ ಎಂದು ಅನ್ನಿಸಿ ಆಕೆಯನ್ನು ಚಿತ್ರದಿಂದ ಕಿಕ್ ಔಟ್  ಮಾಡಿ ಬಿಟ್ಟರು. 

ಅದಾದ ಬಳಿಕ ಅದೇ ಸುದ್ದಿ ಸಾಕಷ್ಟು ಪ್ರಚಾರ ಗಳಿಸಿತ್ತು. ತನಗೆ ತಪ್ಪಿ ಹೋದ ಅವಕಾಶದ ಬಗ್ಗೆ ಪ್ರಣೀತ ಚಿಂತೆ ಮಾಡದೆ  ಬಂದ  ಸವಾಲು ಎದುರಿಸಿ ಹೊಸ ಅವಕಾಶದತ್ತ ಗಮನ ಕೇಂದ್ರೀಕರಿಸಿದ್ದಳು. ಈಗ ಆಕೆ ಕನಸು ನನಸಾಗಿದೆ. ಪ್ರಣೀತ ಬಯಸಿದೆ ಇರುವ ಭಾಗ್ಯ ಕೈಗೂಡಿದೆ. ಕಾಲಿವುಡ್ ನಲ್ಲಿ ಆಕೆಗೆ ನಟಿಸಲು ಅವಕಾಶ ಸಿಕ್ಕಿದ್ದು, ಆ ಚಿತ್ರದಲ್ಲಿ ಸೂರ್ಯ ಹೀರೋ ಆಗಿದ್ದಾರೆ. ಮಾಸ್ ಎನ್ನುವ ಹೆಸರನ್ನು ಪಡೆದಿರುವ ಆ ಚಿತ್ರದಲ್ಲಿ ಈಕೆ ಹೀರೋಯಿನ್ ಆಗ್ತಾ ಇದ್ದಾಳೆ ಎನ್ನುವ ಸುದ್ದಿ ಸೀರಿಯಸ್ ಆಗಿ ಹರಡಿದೆ. 
 
ಆರಂಭದಲ್ಲಿ ಈ ಚಿತ್ರಕ್ಕೆ ನಯನತಾರ ಮತ್ತು ಅಮಿ  ಜಾಕ್ಸನ್ ಗೆ ಅವಕಾಶ ಸಿಕ್ಕಿತ್ತು. ಆದರೆ ತನಗೆ ಸೆಕೆಂಡ್ ಹೀರೋಯಿನ್ ಆಗೋಕೆ ಇಷ್ಟ ಇಲ್ಲ ಎಂದು ಅಮಿ ಹೊರ ನಡೆದಿದ್ದಳು. ಆ ಜಾಗದಲ್ಲಿ ಈಗ ಪ್ರಣೀತ ಬಂದಿದ್ದಾಳೆ.ಮೀಡಿಯಾ ಮೇಲಾಣೆ ಈ ಕಾರಣದಿಂದ ಪ್ರಣೀತಾಗೆ ಇಂತಹ ಅವಕಾಶ ಸಿಕ್ಕಿದೆ. 
 
ಸದ್ಯದಲ್ಲೇ ಬಲ್ಗೇರಿಯಾದಲ್ಲಿ ನಡೆಯುವ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲು ಪ್ರಣೀತ  ಹೋಗುತ್ತಿದ್ದಾಳಂತೆ. ಈ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶಿಸುತ್ತಿದ್ದು, ಇದು ಹಾರರ್ ಆಕ್ಷನ್ ಗಳ ಸಂಗಮವಾಗಿದೆ ಯಂತೆ. ಒಂದು ಬಾಗಿಲು ಮುಚ್ಚಿದರೆ ನೂರು ಬಾಗಿಲುಗಳ ಅವಕಾಶ ತೆರೆದಿರುತ್ತೆ ಎನ್ನುವುದನ್ನು ಇಂತಹ ನಿದರ್ಶನಗಳು ನಿಜ ಮಾಡುತ್ತೆ.

ವೆಬ್ದುನಿಯಾವನ್ನು ಓದಿ