ಅರ್ನಬ್ ಗೋಸ್ವಾಮಿ ಅವರಿಗೆ ನಾನು ಮುತ್ತು ಕೊಡಲು ಬಯಸುತ್ತೇನೆ ಎಂದ ಆರ್ ಜಿವಿ

ಶನಿವಾರ, 28 ನವೆಂಬರ್ 2015 (10:24 IST)
ಹಾರರ್ ಸಿನಿಮಾಗಳ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕನ್ನಡದಲ್ಲಿ ನಿರ್ದೇಶಿಸಿರುವ ಸಿನಿಮಾ ಕಿಲ್ಲಿಂಗ್ ವೀರಪ್ಪನ್. ಈ ಸಿನಿಮಾ ಈಗಾಗಲೇ ರಿಲೀಸ್ ಗೆ ರೆಡಿಯಾಗಿದೆ. ಹೀಗಿರುವಾಗಲೇ ಆರ್ ಜಿವಿ ಸಿನಿಮಾದ ಬದಲಿಗೆ ಬೇರೆಯೇ ಕಾರಣಕ್ಕೆ ಇದೀಗ ಸುದ್ದಿಯಾಗಿದ್ದಾರೆ.ಅದು ಮುತ್ತಿನ ವಿಚಾರಕ್ಕೆ.

 
ಹೌದು... ಮೊನ್ನೆ ಟೈಮ್ ನವ್ ಇಂಗ್ಲೀಷ್ ವಾಹಿನಿಯಲ್ಲಿ ಸೆನ್ಸಾರ್ ಬೋರ್ಡ್ ಕುರಿತು ಚರ್ಚೆ ನಡೆಯುತ್ತಿತ್ತು. ಚರ್ಚೆಯನ್ನು ಅರ್ನಬ್ ಗೋಸ್ವಾಮಿ ಅವರು ನಡೆಸಿಕೊಡುತ್ತಿದ್ದರು. ಕಾರ್ಯಕ್ರಮದಲ್ಲಿ ಸೆನ್ಸಾರ್ ಬೋರ್ಡ್ ನ ಮುಖ್ಯಸ್ಥರಾದ ಪಹ್ಲಾಜ್ ನಿಹ್ಲಾನಿ ಉಪಸ್ಥಿತರಿದ್ದರು. ಈ ವೇಳೆ ಸೆನ್ಸಾರ್ ಬೋರ್ಡ್‌ನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಅರ್ನಬ್ ಪಹ್ಲಾಜ್ ಬೆವರಿಳಿಸಿದ್ರಂತೆ. ಅಲ್ಲದೇ ಕೆಲ ಭಯಂಕರ ಸತ್ಯಗಳನ್ನು ಹೊರಗೆಳೆದ್ರಂತೆ. ಇದನ್ನೆಲ್ಲಾ ಆರ್ ಜಿವಿ ಫುಲ್ ಖುಷಿಯಾಗಿದ್ದಾರೆ.
 
ಅರ್ನಬ್ ಕಾರ್ಯಕ್ರಮ ನಡೆಸಿಕೊಟ್ಟ ರೀತಿ ನೋಡಿ ವರ್ಮಾಗೆ ತುಂಬಾ ಸಂತಸವಾಯಿತಂತೆ.ಆ ಕ್ಷಣವೇ ಅವರಿಗೊಂದು ಮುತ್ತು ನೀಡಬೇಕು ಅನ್ನಿಸಿತ್ತಂತೆ. ಒಬ್ಬ ಪತ್ರಕರ್ತ ಹೇಗೆಲ್ಲಾ ಸತ್ಯವನ್ನು ಹೊರಗೆ ತೆಗೆಯಬಹುದು ಅನ್ನೋದನ್ನು ಅರ್ನಬ್ ತೋರಿಸಿಕೊಟ್ಟಿದ್ದಾರೆ ಎಂದು ವರ್ಮಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ