ಶುಕ್ರವಾರ ತಾಯಿ ವೃಂದಾ ರೈ ಹಾಗೂ ಮಗಳು ಆರಾಧ್ಯಳೊಂದಿಗೆ ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ಐಶ್ ಕೆಲಕಾಲ ದೇಗುಲದಲ್ಲಿ ಕಳೆದ್ರು. ಅಚ್ಚರಿ ಎಂದರೆ ಹತ್ತು ದಿನಗಳ ಹಿಂದೆ ಕೂಡ ಐಶ್ವರ್ಯಾ ರೈ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ರು. ತಮ್ಮ ಸರಬ್ಜಿತ್ ಸಿನಿಮಾದ ಶೂಟಿಂಗ್ ಅಮೃತಸರದಲ್ಲೇ ನಡೆಯುತ್ತಿರೋದರಿಂದ ಐಶ್ವರ್ಯಾ ದೇವಾಲಯಕ್ಕೆ ಎರಡು ಬಾರಿ ಭೇಟಿ ನೀಡಿದ್ದಾರೆ ಅಂತಾ ಹೇಳಲಾಗ್ತಿದೆ.ಇನ್ನು ಸಿನಿಮಾದ ಶೂಟಿಂಗ್ ಕೊನೆಯ ಹಂತ ತಲುಪಿರೋದರಿಂದ ದೇವರ ದರ್ಶನ ಪಡೆಯೋದಕ್ಕಾಗಿ ಹಾಗೇ ಚಿತ್ರದ ಯಶಸ್ಸಿಗೆ ಪ್ರಾರ್ಥಿಸೋದಕ್ಕಾಗಿ ಅವರು ದೇಗುಲಕ್ಕೆ ಭೇಟಿ ನೀಡಿದ್ದಾರೆ ಅಂತಾ ಹೇಳಲಾಗ್ತಿದೆ.