ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ಐಶ್ವರ್ಯಾ ರೈ

ಸೋಮವಾರ, 29 ಫೆಬ್ರವರಿ 2016 (10:59 IST)
ಮೊನ್ನೆಯಷ್ಟೇ ನಟ ಕತ್ರೀನಾ ಕೈಫ್ ತಮ್ಮ ಫಿತೂರ ಸಿನಿಮಾದ ರಿಲೀಸ್ ವೇಳೆ ಫತೇಪುರ್ ಸಿಕ್ರಿಗೆ ಭೇಟಿ ನೀಡಿ ಅರ್ಶೀವಾದ ಪಡೆದುಕೊಂಡು ವಾಪಸ್ಸಾಗಿದ್ದರು. ಇದೀಗ ಐಶ್ವರ್ಯಾ ರೈ ತಮ್ಮ ತಾಯಿ ಹಾಗೂ ಮಗಳು ಆರಾಧ್ಯಳೊಂದಿಗೆ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ ದೇವರ ಆರ್ಶೀವಾದ ಪಡೆದರು.
 
ಶುಕ್ರವಾರ ತಾಯಿ ವೃಂದಾ ರೈ ಹಾಗೂ ಮಗಳು ಆರಾಧ್ಯಳೊಂದಿಗೆ ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ಐಶ್ ಕೆಲಕಾಲ ದೇಗುಲದಲ್ಲಿ ಕಳೆದ್ರು. ಅಚ್ಚರಿ ಎಂದರೆ ಹತ್ತು ದಿನಗಳ ಹಿಂದೆ ಕೂಡ ಐಶ್ವರ್ಯಾ ರೈ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ರು. ತಮ್ಮ ಸರಬ್ಜಿತ್ ಸಿನಿಮಾದ ಶೂಟಿಂಗ್ ಅಮೃತಸರದಲ್ಲೇ ನಡೆಯುತ್ತಿರೋದರಿಂದ ಐಶ್ವರ್ಯಾ ದೇವಾಲಯಕ್ಕೆ ಎರಡು ಬಾರಿ ಭೇಟಿ ನೀಡಿದ್ದಾರೆ ಅಂತಾ ಹೇಳಲಾಗ್ತಿದೆ.ಇನ್ನು ಸಿನಿಮಾದ ಶೂಟಿಂಗ್ ಕೊನೆಯ ಹಂತ ತಲುಪಿರೋದರಿಂದ ದೇವರ ದರ್ಶನ ಪಡೆಯೋದಕ್ಕಾಗಿ ಹಾಗೇ ಚಿತ್ರದ ಯಶಸ್ಸಿಗೆ ಪ್ರಾರ್ಥಿಸೋದಕ್ಕಾಗಿ ಅವರು ದೇಗುಲಕ್ಕೆ ಭೇಟಿ ನೀಡಿದ್ದಾರೆ ಅಂತಾ ಹೇಳಲಾಗ್ತಿದೆ.
 
ಈಗಾಗಲೇ ಸಿನಿಮಾದ ನಿರ್ದೇಶಕ ಒಮಂಗ್ ಕುಮಾರ್ ಹಾಗೇ ಸಿನಿಮಾದ ತಂತ್ರಜ್ಞರ ತಂಡ ಸಿನಿಮಾದ ಶೂಟಿಂಗ್ ಗಾಗಿ ಅಮೃತಸರದಲ್ಲೇ ಬೀಡು ಬಿಟ್ಟಿದೆ.ಇನ್ನು ಚಿತ್ರತಂಡದ ಇನ್ನು ಅನೇಕರು ಕೂಡ ಸ್ವರ್ಣಮಂದಿರಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ