ಕರಣ್ಗೆ ಈ ಪ್ರಶ್ನೆ ಎದುರಾಗಿದ್ದು ಆಲಿಯಾ ಭಟ್ ಮತ್ತು ಶಾರುಖ್ ಖಾನ್ ರಿಂದ. ಅವರ ಪ್ರಶ್ನೆಗೆ ಉತ್ತರಿಸುತ್ತಾ ಐಶ್ವರ್ಯಾಳನ್ನು ಕೊಲೆ ಮಾಡುತ್ತೇನೆ ಎಂದಿದ್ದಾರೆ. ಯಾಕೆ ಎಂದು ಶಾರುಖ್ ಕೇಳಿದಾಗ. "ಯಾಕೆಂದರೆ ಅಭಿಷೇಕ್ ಮತ್ತು ನಾನು ಒಟ್ಟಿಗೆ ಬೆಳೆದವರು. ಆದರೆ ಐಶ್ ಜೊತೆಗೆ ನಾನೇನೇ ಮಾಡಕ್ಕೆ ಆಗಲಿಲ್ಲ. ಹಾಗಾಗಿ ಆಕೆಯನ್ನು ಕೊಲ್ಲುತ್ತೇನೆ" ಎಂದು ತಮಾಷೆಯ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಕರಣ್ ನಿರ್ದೇಶನದ ಏ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಐಶ್ವರ್ಯಾ ರೈ ಮತ್ತು ಅನುಷ್ಕಾ ಶರ್ಮಾ ಅಭಿನಯಿಸಿದ್ದು ಗೊತ್ತೇ ಇದೆ.