ಮಹೇಶ್ ಬಾಬು-ಸಮಂತರನ್ನು ಒಂದು ಮಾಡುತ್ತಿರುವ ಬ್ರಹ್ಮೋತ್ಸವಮ್

ಸೋಮವಾರ, 20 ಏಪ್ರಿಲ್ 2015 (10:41 IST)
ಬೆಳ್ಳಿತೆರೆಯ ಮೇಲೆ ಟಾಲಿವುಡ್ ನಟ ಮಹೇಶ್ ಬಾಬು ಅವರ ಜೊತೆ ಒಂದು ಬಾರಿ ಅವಕಾಶ ಪಡೆಯುವುದಕ್ಕೆ ಒದ್ದಾಡುತ್ತಾರೆ ಹೀರೋಯಿನ್‌ಗಳು ಅಂತಹುದರಲ್ಲಿ ಎರಡು ಬಾರಿ ಅವಕಾಶ ಸಿಕ್ಕರೆ ? ಅಂತಹ ಚಾನ್ಸ್ ನಟಿ ಸಮಂತಾ ಪಡೆದುಕೊಂಡಿದ್ದಳು. ಆಜೋಡಿ ನಟನೆಯ ಎರಡು ಚಿತ್ರಗಳು ಯಶಸ್ವಿಯಾಗಿತ್ತು. ಆದರೆ ಈಗ ಅವರಿಬ್ಬರ ಅಭಿಮಾನಿಗಳು ಈ ಜೋಡಿಯ ಮತ್ತೊಂದು ಸಿನಿಮಾ ನಿರೀಕ್ಷಿಸಿ ಅವರಿಂದ ಹ್ಯಾಟ್ರಿಕ್ ಫಲಿತಾಂಶ ನಿರೀಕ್ಷೆ ಮಾಡುತ್ತಿದ್ದಾರೆ. 

ಆದರೆ  ಗೆಲುವಿನ ಸಂತೋಷದಿಂದಲೋ ಅಥವಾ ತುಂಬಾ ಹಗುರವಾಗಿ ತಿಳಿದ ಕಾರಣದಿಂದಲೂ ಅಂತೂ ಕಾರಣ ಏನೇ ಇರಬಹುದು ಸಮ್ಮು ನಟ ಮಹೇಶ್ ಅವರ ಮಾತಾಡಿದ ಬಗೆಯಿಂದ ಆ ಸ್ಟಾರ್ ನಟನ ಮನಕ್ಕೆ ನೋವಾಗಿತ್ತು. ಹೀಗೆ ಬಾಂಧವ್ಯದ ಮೇಲೆ ಮಾತಿನ ಕಲ್ಲು ಹಾಕಿ ಕತ್ತರಿಸಿಕೊಂಡಿದ್ದ  ಸಮ್ಮು- ಮಹೇಶ್ ಅವರ ಬಂಧವನ್ನು ನಿರ್ದೇಶಕ ತ್ರಿವಿಕ್ರಂ ಅವರು ಸರಿ ಪಡಿಸಿದರು. 
 
ಈಗ ಅವರಿಬ್ಬರೂ ಫ್ರೆಂಡ್ಸ್ ಆಗಿದ್ದಾರೆ ಎನ್ನುವುದಕ್ಕೆ ಈಗ ಪುರಾವೆ ದೊರಕಿದೆ. 'ಸೀತಮ್ಮ ವಾಕಿಲ್ಲೋ ಸಿರಿಮಲ್ಲೇ ಚೆಟ್ಟು' ಹಾಗೂ 'ಮುಕುಂದಾ'ದಂತಹ ಕೌಟುಂಬಿಕ ಸೆಂಟಿಮೆಂಟ್ ಕಥಾಹಂದರ ಇರುವ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀಕಾಂತ್ ಅಡ್ಡಾಲ ಸಧ್ಯದಲ್ಲೇ ಈ ತಾರ ಜೋಡಿಯನ್ನು ಹಾಕಿಕೊಂಡು ಸಿನಿಮಾ ಒಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದರ ಹೆಸರು ಬ್ರಹ್ಮೋತ್ಸವಮ್ ಎಂದು ನಿಗದಿಯಾಗಿದೆ. ಇದು ಭಾರಿ ಅದ್ಧೂರಿಯ ಚಿತ್ರವೆನ್ನುವ ಸುದ್ದಿ ಹೊರಬಂದಿದೆ.  
 
ಈ ಚಿತ್ರದಲ್ಲಿ ಮಹೇಶ್ ಅವರ ಜೋಡಿಯಾಗಿ ಸಮಂತ ಆಯ್ಕೆ ಆಗಿದ್ದಾಳಂತೆ. ಈ ಚಿತ್ರದಲ್ಲಿ ಗ್ಲಾಮರ್ ಪಾತ್ರಗಳಿಗೆಂದು ತಾಪ್ಸಿ ಪನ್ನು ಹಾಗೂ ಪ್ರಣೀತ ಆಯ್ಕೆಯಾಗಿದ್ದಾರಂತೆ. ಜೂನ್ ತಿಂಗಳಿನಿಂದ ಈ ಚಿತ್ರದ ಶೂಟಿಂಗ್ ಆರಂಭವಾಗುತ್ತದೆ ಎನ್ನುತ್ತಿದೆ ಚಿತ್ರತಂಡ.

ವೆಬ್ದುನಿಯಾವನ್ನು ಓದಿ