ಮಾರ್ಚ್ 12 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳ ಸಂಜಯ್ ದತ್ ಯರವಾಡ ಜೈಲಿನಲ್ಲಿದ್ದರು. ಇವತ್ತು ಸಂಜಯ್ ದತ್ ಅವರು ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಸಂಜಯ್ ಅವರು ಎದುರುಗೊಳ್ಳೋದಕ್ಕೆ ಅವರ ಅಭಿಮಾನಿಗಳು, ಬಾಲಿವುಡ್ ಸ್ನೇಹಿತರು ಹಾಗೇ ಕುಟುಂಬದವರು ರೆಡಿಯಾಗಿದ್ದಾರೆ. ಇನ್ನು ಸಂಜಯ್ ರಿಲೀಸ್ ಆಗುತ್ತಿದ್ದರಿಂದ ಅವರ ಗೆಳೆಯ ನಿರ್ಮಾಪಕ ವಿದು ವಿನೋದ್ ಛೋಪ್ರಾ ಫುಲ್ ಖುಷಿಯಾಗಿದ್ದಾರಂತೆ.