ಅಭಿಮಾನಿಗಳಿಗೆ ಥ್ರಿಲ್ ಕೊಟ್ಟ ಮುನ್ನಾಬಾಯ್

ಶನಿವಾರ, 25 ಫೆಬ್ರವರಿ 2017 (07:02 IST)
ಜೈಲಿನಿಂದ ಬಿಡುಗಡೆಯಾದ ಬಳಿಕ ನಟ ಸಂಜಯ್ ದತ್ ಹೊರಗಡೆ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಅವರು ಮಾಡಲಿರುವ ಸಿನಿಮಾಗಳ ಬಗ್ಗೆ ಸಾಕಷ್ಟು ಸುದ್ದಿಗಳು ಬಂದವೇ ಹೊರತು ಸಂಜಯ್ ಮಾತ್ರ ಮಾಧ್ಯಮಗಳ ಮುಂದೆ ಬರಲಿಲ್ಲ. 
 
ಇತ್ತೀಚೆಗೆ ಅವರು ಒಮಂಗ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಭೂಮಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಮುನ್ನಾಬಾಯ್ ಅಭಿನಯಿಸುತ್ತಿರುವ ಬಗ್ಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಮತ್ತೆ ಅವರಲ್ಲಿ ಹೊಸ ಉತ್ಸಾಹ ಗರಿಗೆದರಿದೆ. ಹಳೆಯದನ್ನೆಲ್ಲಾ ಮರೆತು ಈಗ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.
 
ಈ ಬಗ್ಗೆ ಸಂಜುಬಾಬಾ ಪತ್ನಿ ಮಾನ್ಯತಾ ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಕುಟುಂಬದೊಂದಿಗೆ ಕಳೆಯುವುದಕ್ಕಿಂತ ಮಿಗಿಲಾದ ಆನಂತ ಮತ್ತೊಂದಿಲ್ಲ ಎಂದಿದ್ದಾರೆ. ಇತ್ತೀಚೆಗೆ ಸ್ಕೂಟರ್‌ನಲ್ಲಿ ಪತ್ನಿ ಮಕ್ಕಳ ಜತೆಗೆ ರೌಂಡ್ ಹೊಡೆದ ಫೋಟೋವನ್ನು ಎಲ್ಲರೊಂದಿಗೆ ಹಂಚಿಕೊಂಡು ಈ ಮಾತು ಹೇಳಿದ್ದಾರೆ ಮಾನ್ಯತಾ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ