ನಾನಿನ್ನು ಹಾಗೆ ಆಗಿಲ್ಲ.. ಅದೆಲ್ಲ ಸುಳ್ಳು .. ಆ ವದಂತಿ ನಿಜವಾಗಲಿ -ರಾಣಿ ಮುಖರ್ಜಿ

ಶನಿವಾರ, 16 ಆಗಸ್ಟ್ 2014 (10:15 IST)
ಸಾಮಾನ್ಯವಾಗಿ ತಮ್ಮ ಬಗ್ಗೆ ಗಾಸಿಪ್ ಗಳು ಹರಡಿದರೆ, ರೂಮರ್ ಗಳು ಬಂದರೆ ತಕ್ಷಣ ರಿಯಾಕ್ಟ್ ಮಾಡ್ತಾರೆ ಹೀರೋಯಿನ್ ಗಳು ಇಲ್ಲವೇ ಇದರ ಉಸಾಬರಿ ಬೇಡ ಅಂತ ಸುಮ್ಮನಾಗುತ್ತಾರೆ. ಆದ್ರೆ ರಾಣಿ ಮುಖರ್ಜಿ ತನ್ನ ಬಗ್ಗೆ ಹರಡಿರುವ ವದಂತಿಗಳನ್ನು ತುಂಬಾ ಆರಾಮದಾಯಕವಾಗಿ ಸ್ವೀಕರಿಸಿ ಅದಕ್ಕೆ ತನಗೆ ಆಶೀರ್ವಾದ ಬೇಕು ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾಳೆ. ರಾಣಿ ಕಳೆದ ಕೆಲವು ವರ್ಷಗಳಿಂದ ಆದಿತ್ಯ ಚೋಪ್ರ ಅವರನ್ನು ಪ್ರೀತಿಸುತ್ತಿದ್ದಳು. ಅಂತಿಮವಾಗಿ ಈ ವರ್ಷ ಅವರಿಬ್ಬರ ಪ್ರೀತಿಗೆ ಒಂದು ಅರ್ಥ ಸಿಕ್ಕಿತು, ಇಬ್ಬರು ಮದುವೆ ಆದರು. ಅದಾದ ಬಳಿಕ ಈ ಜೋಡಿ ಇನ್ನು ವೈವಾಹಿಕ ಬದುಕನ್ನು ಆರಂಭಿಸಿಯೇ ಇಲ್ಲ ಆಗಲೇ ಈಕೆ ಗರ್ಭಿಣಿ ಎನ್ನುವ ಸುದ್ದಿ ಹರಡಿದೆ. 
 
ಇದಕ್ಕೆ ಪ್ರತಿಕ್ರಿಯಿಸಿದ ರಾಣಿ ಮುಖರ್ಜಿ ಈ ಸುದ್ದಿ ಬೇಗ ಸತ್ಯವಾಗಲಿ.  ತಾಯ್ತನ ಹೆಣ್ಣಿನ ಬದುಕಿನ ಅತ್ಯಂತ ಸುಂದರ ಕ್ಷಣ. ಅದು ಆಕೆಯ ಸಾರ್ಥಕ ಬದುಕಿನ ಮುಖ್ಯ ಸಂಗತಿ.ತಾನು ಇನ್ನು ಬಸುರಿ ಆಗಿಲ್ಲ, ಆದರೂ ಜನರು ಈ ಬಗ್ಗೆ ಸುದ್ದಿ ಹರಡಿಸಿದ್ದಾರೆ. ಇದು ಬೇಗ ನಿಜವಾಗಲಿ, ಜನರ ಆಶೀರ್ವಾದ ತನ್ನ ಮೇಲಿರಲಿ ಎನ್ನುವ ಮಾತನ್ನು ಹೇಳಿದ್ದಾಳೆ. ಇತ್ತೀಚಿಗೆ ಹಿಂದಿ ರಿಯಾಲಿಟಿ ಷೋ ಝಲಕ್ ದಿಕಲಾಜ  ಕಾರ್ಯಕ್ರಮದಲ್ಲಿ ಮರ್ದಾನಿ ಚಿತ್ರದ ಪ್ರಮೋಶನ್ ಗೆ ಬಂದಿದ್ದ ರಾಣಿಯ ವರ್ತನೆ ಮತ್ತು ಮಾಧುರಿ ದೀಕ್ಷಿತ್ ವರ್ತನೆಯು ಸಾಕಷ್ಟು ಈ ವದಂತಿಗಳು ನಿಜವೆನ್ನುವಂತೆ ಮಾಡಿತ್ತು. ಆದರೆ ಆ ರೀತಿಯಿಲ್ಲ ಎಂದು ಹೇಳಿ ರಾಣಿ ಸುದ್ದಿಗಳಿಗೆ ಪೂರ್ಣ ವಿರಾಮ ಹಾಕಿದ್ದಾಳೆ.

ವೆಬ್ದುನಿಯಾವನ್ನು ಓದಿ