ಐಶ್ವರ್ಯ ರೈ- ಅಭಿಷೇಕ್ ಮಧ್ಯೆ ಮನಸ್ತಾಪ ಇದೆ ಎಂಬ ವದಂತಿ ಬೆನ್ನಲ್ಲೇ, ಇದೀಗ ಐಶ್ವರ್ಯ ರೈ ತಾಳ್ಮೆ ಕಳೆದುಕೊಂಡಿದ್ದು ಕಂಡು ಬಂದಿದೆ. ಹಳೆಯ ವಿಷಯಗಳನ್ನು ಮತ್ತೆ ಪ್ರಸ್ತಾಪಿಸಿರುವ ಬಗ್ಗೆ ಐಶ್ವರ್ಯಗೆ ನೋವಾಗಿದೆ. ಅದಕ್ಕಾಗಿ ಅವರು ಸಂದರ್ಶನದ ವೇಳೆ ತಾಳ್ಮೆ ಕಳೆದುಕೊಂಡು ಹೊರ ನಡೆದಿದ್ದಾರೆ.
'ಸರಬ್ಜಿತ್' ಚಿತ್ರದ ಸಂದರ್ಶನದಲ್ಲಿ ಖಾಸಗಿ ಮಾಧ್ಯಮ ಸಂಸ್ಥೆಗೆ ಐಶ್ವರ್ಯ ರೈ ಬಂದಿದ್ದರು. ಈ ವೇಳೆ ಭವಿಷ್ಯದಲ್ಲಿ ಮತ್ತೆ ಸಲ್ಮಾನ್ ಜತೆಗೆ ಚಿತ್ರ ಮಾಡಲು ಬಯಸುತ್ತೀರಾ ? ಎಂದು ಕೇಳಲಾದ ಪ್ರಶ್ನೆಗೆ ಐಶ್ ಎದ್ದು ನಿಂತು ಸಂದರ್ಶನ ನಿಲ್ಲಿಸುವಂತೆ ಸೂಚಿಸಿದ್ರಂತೆ. ಬಳಿಕ ಸಂದರ್ಶನದಿಂದ ಐಶ್ ಹೊರನಡೆದಿದ್ದಾರೆ. ಈ ವೇಳೆ ಸಂದರ್ಶನದ ಕೆಲ ಫೂಟೇಜ್ಗಳನ್ನು ತೆಗೆದುಕೊಂಡು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.