ಪಂಚತಾರಾ ಹೊಟೇಲ್ಗಳಲ್ಲಿ 'ಕಬಾಲಿ' ರಿಲೀಸ್ ಆಗುತ್ತಿದೆ ಎಂದು ಹೇಳಲಾಗುತ್ತಿತ್ತು. ಬೆಂಗಳೂರಿನ ಪಂಚತಾರಾ ಹೊಟೇಲ್ಗಳಲ್ಲಿ ಕಬಾಲಿ ಚಿತ್ರ ರಿಲೀಸ್ ಕಾಣುತ್ತಿಲ್ಲ.. ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ ಶಂಕರ್ ರಿಲೀಸ್ಗೆ ಅನುಮತಿ ನೀಡುವುದನ್ನು ತಿರಸ್ಕಾರ ಮಾಡಿದ್ದಾರೆ.
ವಿತರಕರು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾಧಿಕಾರಿ ತಿರಸ್ಕರಿಸಿದ್ದಾರೆ. ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಮಾತ್ರ ಕಬಾಲಿ ರಿಲೀಸ್ಗೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಚಿತ್ರ ಸಂಸ್ಥೆಯ ಅನ್ವಯದಂತೆ ಹಾಗೂ ಕರ್ನಾಟಕ ಸಿನಿಮಾ ಆ್ಯಕ್ಟ್ನಂತೆ ಕಬಾಲಿ ಚಿತ್ರವನ್ನು ಪಂಚತಾರಾ ಹೊಟೇಲ್ಗಲ್ಲಿ ಬಿಡುಗಡೆ ಮಾಡುವುದನ್ನು ತಿರಸ್ಕಾರಿಸಲಾಗಿದೆ ಎಂದು ಮಾಹಿತಿ ಹೊರಬಿದ್ದಿದೆ.
ಪಂಚಾತಾರಾ ಹೊಟೇಲ್ಗೆ ಹೋಗಿ ನೀವೂ ಸಿನಿಮಾ ನೋಡಬೇಕಾದರೆ ಪ್ರತಿ ಟಿಕೆಟ್ ಬೆಲೆ 1300ರೂ. ದರ ನಿಗದಿಪಡಿಸಲಾಗಿತ್ತು. ರಜನಿ ಫ್ಯಾನ್ಸ್ಗಳು ಇಲ್ಲಿಯೂ ಚಿತ್ರವನ್ನು ಕೂಡ ನೋಡುವ ಅವಕಾಶವಿಲ್ಲ.
ಆದ್ರೆ ಕರ್ನಾಟಕದ ಸಿನಿಮಾ ಚೇಂಬರ್ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.. ಚೇಂಬರ್ ಪ್ರಕಾರ ಚಿತ್ರ ಪ್ರದರ್ಶನಕ್ಕೆ ಚಿತ್ರಮಂದಿರಗಳಿಗೆ ಮಾತ್ರ ಲೈಸನ್ಸ್ ನೀಡಲಾಗಿದ್ದು, ಅನುಮತಿ ನೀಡಿದ್ರೆ ಸ್ಯಾಂಡಲ್ವುಡ್ ಇಂಡಸ್ಟ್ರಿ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿತ್ತು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ