ಚಿತ್ರಕ್ಕೆಂದು ಸಿನಿಮಾ ಫೈನಾನ್ಸಿಯರ್ ಬಳಿ ಪಡೆದ ಸಾಲ ತೀರಿಸಲು ರಜನಿ ಈ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಹೀಗಂತ ಸುದ್ದಿ ಹರಡುತ್ತಿದ್ದಾರೆ ಜನ. ವಾಸ್ತವಾಂಶ ಏನು ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಇನ್ನು ಕೆಲವು ಸುದ್ದಿ ಪ್ರಕಾರ ಗುಂಟೂರು ಈಗ ಆಂಧ್ರ ಪ್ರದೇಶದ ರಾಜಧಾನಿ ಆಗಲಿದ್ದು. ಅಲ್ಲಿ ಒಂದಷ್ಟು ಜಾಗ ಕೊಳ್ಳಲು ಇಲ್ಲಿರುವ ಆಸ್ತಿ ಮಾರುತ್ತಿದ್ದಾರಂತೆ. ಒಟ್ಟಾರೆ ಭಾರಿ ಪ್ರಮಾಣದಲ್ಲಿ ಖರ್ಚುಮಾಡಿ ನಿರ್ಮಿಸಿದ ಚಿತ್ರ ಸೋತು ಮಕಾಡೆ ಮಲಗಿದರೆ ಆಗುವ ತೊಂದರೆ ಎಂತಹದ್ದು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.