ಮುಂಬೈ: ಬಾಲಿವುಡ್ ಚಾಕೊಲೇಟ್ ಹೀರೋ ರಣಬೀರ್ ಕಪೂರ್ ಟೆನ್ ಷನ್ ಮಾಡಿಕೊಂಡಿದ್ದಾರಂತೆ!. ಕಾರಣ ಮುಂದಿನ ವಾರ ತೆರೆ ಕಾಣಲಿರುವ ತಮ್ಮಅಭಿನಯದ “ಏ ದಿಲ್ ಹೇ ಮುಷ್ಕಿಲ್”.
ಹೀಗೆಂದು ಅವರ ಸ್ನೇಹಿತ, ನಿರ್ದೇಶಕ ಅಯನ್ ಮುಖರ್ಜಿ ಹೇಳಿದ್ದಾರೆ. ಈ ದೀಪಾವಳಿಗೆ ಚಿತ್ರ ಬಿಡುಗಡೆಯಾಗುತ್ತಿದೆ. ಆದರೆ ಪಾಕಿಸ್ತಾನ ನಟ ಅಭಿನಯಿಸಿದ್ದಕ್ಕೆ ಎಂಎನ್ಎಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಚಿತ್ರ ಬಿಡುಗಡೆಯಾದಾಗ ಏನಾಗುತ್ತದೋ ಎಂದು ರಣಬೀರ್ ಆತಂಕದಲ್ಲಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ನಟಿ ರಿಚಾ ಛಡ್ಡಾ ಕೂಡಾ ಕರಣ್ ಜೋಹರ್ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೂ ಕೆಲವು ನಟ-ನಟಿಯರು ಚಿತ್ರ ಬಿಡುಗಡೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೂಡಾ ಅಭಯ ನೀಡಿದ್ದಾರೆ. ಹೀಗಿದ್ದೂ ರಣಬೀರ್ ಗೆ ಆತಂಕವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ