ಬಾಲಿವುಡ್ನ ಖ್ಯಾತ ನಿರ್ದೇಶಕ ರಾಮಗೋಪಾಲ ವರ್ಮಾ ಸದಾ ಒಂದಿಲ್ಲೊಂದು ಹೇಳಿಕೆ ನೀಡುವುದರ ಮೂಲಕ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೊಂದು ವಿಷಯ ಕುರಿತು ಟೀಕೆ ಮಾಡಿದ್ದಾರೆ ಆರ್ಜಿವಿ. ಸದ್ಯ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಲ್ಲಿ ಉಪಯೋಗಿಸಲಾಗಿರುವ ಜಾಹೀರಾತು ಕುರಿತು ಟೀಕೆ ಮಾಡಿದ್ದಾರೆ.
ಫಿಲ್ಮಂ ಡಿವಿಜನ್ನಲ್ಲಿ ಬಳಕೆ ಮಾಡಿರುವ ಸ್ವಚ್ಛ ಭಾರತ ಜಾಹೀರಾತು ಕೆಟ್ಟದಾಗಿದ್ದು, ಇಂಥ ಜಾಹೀರಾತುಗಳು ದೇಶಕ್ಕೆ ಉತ್ತಮವಾದುದಲ್ಲ ಎಂದಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಇಂಥ ಜಾಹೀರಾತುಗಳನ್ನು ಬಳಕೆ ಮಾಡದಂತೆ ಯಾರಾದರೂ ತಿಳಿಸಿ ಎಂದು ರಾಮಗೋಪಾಲ ವರ್ಮಾ ಹೇಳಿದ್ದಾರೆ
ಇತ್ತೀಚೆಗೆ ಮೋದಿ ಬೆಂಬಲಿಗರಿಂದ ಆರ್ಜಿವಿಗೆ ನೆಗೆಟಿವ್ ಕಮೆಂಟ್ಗಳು ಬರುತ್ತಿದ್ದವು.. ಕೆಲವರು ಆರ್ಜಿವಿ ಅವರ ವೈಯಕ್ತಿಕ ವಿಷಯದ ಕುರಿತು ಟೀಕೆ ಮಾಡಿದ್ದರು.