ಬಿಡುಗಡೆಗೆ ಸಿದ್ಧವಾಗಿರುವ ಈ ಸಿನಿಮಾದ ಪೂರ್ವ ವೀಕ್ಷಣೆಗಾಗಿ ಮುಂಬೈನಲ್ಲಿ ಚಿತ್ರರಂಗದ ಗಣ್ಯರನ್ನು ಆಮಂತ್ರಿಸಲಾಗಿತ್ತು. ಈ ಸಂದರ್ಭದಲ್ಲಿ ಚಿತ್ರದ ನಾಯಕ ನಟ ಸಲ್ಲು ಕೂಡ ಹಾಜರಿದ್ದರು. ಸ್ವಭಾವತಃ ಸಲ್ಲು ಭಾವುಕ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಷ್ಟೇ!. ಚಿತ್ರದ ಸಂಪೂರ್ಣ ಕಥೆಯನ್ನು ಸಿನಿಮಾ ನೋಡಿದ ಬಳಿಕವಷ್ಟೇ ತಿಳಿದುಕೊಂಡ ಸಲ್ಲು ಚಿತ್ರ ಮುಗಿಯುತ್ತಿದ್ದಂತೆ ಕಣ್ಣೀರು ಹರಿಸುತ್ತಿದ್ದರೆಂದು ವರದಿಯಾಗಿದೆ. ಚಿತ್ರ ಅದ್ಭುತವಾಗಿ ಮೂಡಿಬಂದುದಕ್ಕೆ ನಟ ಭಾವುಕರಾದರು ಎಂದು ಹೇಳಲಾಗುತ್ತಿದೆ.