ತಿರುಪತಿ ಎಕ್ಸ್ಪ್ರೆಸ್ ಮೂಲಕ ಅದೃಷ್ಟ ಪರೀಕ್ಷೆ ಮಾಡುತ್ತಿರುವ ಸುಮಂತ್

ಶುಕ್ರವಾರ, 2 ಮೇ 2014 (09:42 IST)
ಮಕ್ಕಳನ್ನು ಸಿನಿಮಾರಂಗದಲ್ಲಿ ಬೆಳಸ ಬೇಕು ಎಂದು ಆಶಿಸುವ ತಾಯಿತಂದೆ ಹೇರಳವಾಗಿದ್ದಾರೆ, 
 
ಅದರಲ್ಲೂ ಚಿತ್ರರಂಗದಲ್ಲೇ ಬದುಕನ್ನು ಕಟ್ಟಿಕೊಂಡಿರುವವರಿಗೆ ತಮ್ಮ ಮಕ್ಕಳ ಏಳಿಗೆಯೂ ಇಲ್ಲೇ ಆಗ 
 
ಬೇಕು ಎನ್ನುವ ಆಸೆ. ಇದಕ್ಕೆ ಸಂಬಂಧಪಟ್ಟಂತೆ  ನಿರ್ಮಾಪಕ ಶೈಲೇಂದರ್ ಬಾಬು ಅವರು ಹೊರತಲ್ಲ.
 
 
ಮಗನನ್ನು ಹಾಕಿಕೊಂಡು  ನಿರ್ಮಾಪಕ ಶೈಲೇಂದರ್ ಬಾಬು 'ಆಟ' , 'ದಿಲ್ ವಾಲಾ' ಚಿತ್ರಗಳನ್ನು 
 
ತೆರೆದರು. ಆದರೆ ಅವುಗಳಿಂದ ಹೇಳಿಕೊಳ್ಳುವ ಯಶಸ್ಸು ಕಾಣದ ಕಾರಣ ಈಗ ' ತಿರುಪತಿ ಎಕ್ಷ್ಸ್ಪ್ರೆಸ್ಸ್'  
 
ಚಿತ್ರ ಮಾಡಿದ್ದಾರೆ ನಿರ್ಮಾಪಕರು. ತೆಲುಗು  'ವೆಂಕಟಾದ್ರಿ ಎಕ್ಸ್ಪ್ರೆಸ್' ಸಿನೆಮಾದ ರೀಮೇಕ್. ಎರಡು 
 
ಸ್ವಮೇಕ್ ನಂತರ ಮೂರನೆಯದು ಸುಮಂತ್ ಅವರಿಗೆ ರೀಮೇಕ್.'ತಿರುಪತಿ ಎಕ್ಸ್ ಪ್ರೆಸ್ ಚಿತ್ರದ 
 
ಬಹುತೇಕ ಚಿತ್ರೀಕರಣ ಪೂರ್ಣವಾಗಿದೆ. 

 
ಬೆಂಗಳೂರು, ಮದ್ದೂರು, ತಿರುಪತಿ, ಹೈದರಾಬಾದ್, ಚೆನ್ನೈ ಮುಂತಾದ ಕಡೆ ಚಿತ್ರೀಕರಣ ನಡೆದಿದ್ದು, ಒಂದು ಹಾಡಿನ ಚಿತ್ರೀಕರಣ ಬಾಕಿಯಿದೆಯಂತೆ.ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರಬಾಬು ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಪಿ.ಕುಮಾರ್ ನಿರ್ದೇಶಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹಣ  ಚಿತ್ರಕ್ಕಿದೆ. ಸುಮಂತ್, ಕೃತಿ ಖರಬಂಧ, ಸಾಧುಕೋಕಿಲ, ಮುಂತಾದವರು ಚಿತ್ರದಲ್ಲಿದ್ದಾರೆ. 

ವೆಬ್ದುನಿಯಾವನ್ನು ಓದಿ