ಬೆಂಗಳೂರಿನ ಥಿಯೇಟರ್ ನಲ್ಲಿ ಕಾಣಿಸಿಕೊಂಡ ತಲೈವಾ...

ಬುಧವಾರ, 27 ಜುಲೈ 2016 (08:36 IST)
ಕಬಾಲಿ ವಿಶ್ವದಾದ್ಯಂತ ಈಗ ಕಬಾಲಿ ಸಿನಿಮಾದ್ದೇ ಹವಾ.ಎಲ್ಲರ ಬಾಯಲ್ಲೂ ಕಬಾಲಿ ಸಿನಿಮಾದ ಡೈಲಾಗ್ ಗಳೇ ಹರಿದಾಡುತ್ತಿವೆ. ರಜಿನಿಕಾಂತ್ ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಪ್ರಶಂಸೆಯ ಸುರಿಮಳೆಯೇ ಹರಿದು ಬರುತ್ತಿದೆ. ಹೀಗಿರುವಾಗಲೇ ಬೆಂಗಳೂರಿನ ರಜಿನಿ ಅಭಿಮಾನಿಗಳು ಫುಲ್ ಖುಶಿಯಾಗಿದ್ದರು.


ಮೊನ್ನೆ ಸಿಲಿಕಾನ್ ಸಿಟಿಯ ಮುಕುಂದ ಸಿನಿಮಾ ಮಂದಿರಕ್ಕೆ ಕಬಾಲಿ ಸಿನಿಮಾ ನೋಡೋದಕ್ಕೆ ಹೋದ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಥಿಯೇಟರ್ ನಲ್ಲೇ ಅವೆರಲ್ಲರಿಗೂ ಕಬಾಲಿಯನ್ನು ಕಣ್ತುಂಬಿಕೊಳ್ಳುವಂತಹ ಅವಕಾಶ ಸಿಕ್ಕಿತ್ತು.ಅಂದ್ಹಾಗೆ ಅದು ಹೇಗೆ ಅಂದುಕೊಂಡ್ರಾ.ಅಭಿಮಾನಿಗಳಿಗೆ ಇಂತಹದ್ದೊಂದು ಅವಕಾಶ ಮಾಡಿಕೊಟ್ಟದ್ದು ಕಲಾವಿದ ವಿಲಾಸ್ ನಾಯಕ್ ಅವರು.

ಮುಕುಂದ ಚಿತ್ರಮಂದಿರದಲ್ಲಿ ಕಬಾಲಿ ಸಿನಿಮಾ ಆರಂಭವಾಗೋದಕ್ಕೂ ಮುನ್ನವೇ ವಿಲಾಸ್ ಕೆಲವೇ ಕ್ಷಣಗಳಲ್ಲಿ ರಜಿನಿಕಾಂತ್ ಅವರ ಚಿತ್ರವನ್ನು ಕ್ಯಾನ್ವಾಸ್ ಮೇಲೆ ಬಿಡಿಸಿದ್ರು.

ಇನ್ನು ವಿಲಾಸ್ ನಾಯಕ್ ಅವರು ಚಿತ್ರ ಬಿಡಿಸಿ ಮುಗಿಸಿದ್ದೇ ತಡ ಅಭಿಮಾನಿಗಳು ತಲೈವಾ ತಲೈವಾ ಅಂತಾ ಕೂಗಾಡೋಕೆ ಶುರು ಮಾಡಿದ್ರಂತೆ.ಅಲ್ಲದೇ ತಮ್ಮ ನೆಚ್ಚಿನ ನಾಯಕ ಚಿತ್ರದ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ರಂತೆ. ರಜಿನಿಕಾಂತ್ ಅವರು ಅಭಿಮಾನಿಗಳಿಗೆ ವಿಲಾಸ್ ಮಾಡಿದ ಚಿತ್ರ ಭರ್ಜರಿ ಮನೋರಂಜನೆ ನೀಡ್ತು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ