ತ್ರಿಷ ಕನ್ನಡದಲ್ಲಿ ಪವರ್ ಸ್ಟಾರ್ ಚಿತ್ರದಲ್ಲಿ ನಟಿಸಿ ಪುನೀತ್ ರಾಜ್ ಕುಮಾರ್ ಅವರ ಜೊತೆ ಕನ್ನಡಿಗರ ಮನ ತಣಿಸಲು ಸಿದ್ಧ ಆಗಿದ್ದಾಳೆ. ಈಗ ಆಕೆ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಅವರ ನಟನೆಯ ಗಾಡ್ಸ್ ಚಿತ್ರದಲ್ಲೂ ಸಹಿತ ನಟಿಸುತ್ತಿದ್ದಾಳೆ. ಅಲ್ಲದೆ ಈಗ ಬಂದಿರುವ ಸುದ್ದಿ ಪ್ರಕಾರ ದಕ್ಷಿಣ ಭಾರತದ ಪ್ರಸಿದ್ದ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ಚಿತ್ರದಲ್ಲಿ ಅವಕಾಶ ಪಡೆದುಕೊಂಡಿದ್ದಾಳೆ!
ನಾಗಾರ್ಜುನ ಮತ್ತು ಮಹೇಶ್ ಅವರ ನ್ನು ಜೊತೆ ಮಾಡಿಕೊಂಡು ಸಿನಿಮಾ ನಿರ್ದೇಶಿಸುವ ಆಸೆ ಮಣಿರತ್ನಂ ಅವರಿಗೆ ಸಾಕಷ್ಟು ದಿನಗಳಿಂದ ಇದೆ. ಆದರೆ ಅದಕ್ಕೆ ಸಮಯ ಗಳಿಗೆ ಕೂಡಿ ಬಂದಿಲ್ಲ. ಮಣಿ ರತ್ನಂ ಕಾಲಿವುಡ್ ನ ಯಂಗ್ ಹೀರೋ ಜೈ ಅವರನ್ನು ಹಾಕಿಕೊಂಡು ಒಂದು ಲವ್ ಸ್ಟೋರಿ ಒಳಗೊಂಡ ಚಿತ್ರ ನಿರ್ದೇಶಿಸುವ ಆಶಯ ಹೊಂದಿದರು. ಆದರೆ ಇಲ್ಲಿ ಸಹ ಅವರಿಗೆ ಹೀರೋಯಿನ್ ಸಮಸ್ಯೆ ಕಾಡಿತು. ಈಗ ಆ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುತ್ತಿದ್ದಾಳೆ ಈ ಚೆಲುವೆ. ಜೈ ನಂತಹ ಹೊಸ ಹೀರೋ ಜೊತೆ ನಟಿಸುವ ಆಸಕ್ತಿ ಇಲ್ಲದೆ ಇದ್ದರು ಹಿರಿಯ ನಿರ್ದೇಶಕ ಮಣಿ ಅವರ ಮಾತಿಗೆ ಬೆಲೆ ಕೊಟ್ಟು ಆಕೆ ನಟಿಸಲು ಸಿದ್ಧತೆ ನಡಿಸಿದ್ದಾಳೆ. ಯುವ ಚಿತ್ರದಲ್ಲಿ ಮಣಿರತ್ನಂ ಈಕೆಗೆ ಅವಕಾಶ ನೀಡಿದ್ದರು. ಅದು ಸಾಕಷ್ಟು ಯಶಸ್ಸು ನೀಡಿತ್ತು. ಆ ಋಣ ಸಂದಾಯ ಮಾಡಲು ಈಗ ಹೊಸ ಚಿತ್ರದಲ್ಲಿ ನಟಿಸಲು ಓಕೆ ಅಂದಿದ್ದಾಳಂತೆ!