ಆತ್ಮಹತ್ಯೆಗೆ ಶರಣಾದ ಟಿವಿ ನಿರೂಪಕಿ

ಬುಧವಾರ, 16 ಮಾರ್ಚ್ 2016 (11:46 IST)
ತೆಲುಗು ಟಿವಿ ನಿರೂಪಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಸಿಕಂದರಾಬಾದ್‌ನ ಸಿಂಧಿ ಕಾಲೋನಿಯ ಪಿಜಿಯೊಂದರಲ್ಲಿ ಇಂದು ಬೆಳಿಗ್ಗೆ ನಡೆದಿದೆ.
 
23 ವರ್ಷದ ನಿರೋಶಾ ಆಂಧ್ರದ ಚಿತ್ತೂರು ಜಿಲ್ಲೆಯ ಸೋಮಲಾ ಮಂಡಲದರಾಗಿದ್ದು ಹೈದರಾಬಾದ್‌ನಲ್ಲಿ ಮ್ಯೂಸಿಕ್ ಚಾನಲ್‌ವೊಂದರಲ್ಲಿ ನಿರೂಪಕಿಯಾಗಿದ್ದರು. ಈ ಮೊದಲು ಆಕೆ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. 
 
ಘಟನೆಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಸಮಸ್ಯೆ ಅಥವಾ ಪ್ರೇಮ ವೈಫಲ್ಯ ಘಟನೆಗೆ ಕಾರಣವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಆಕೆಯ ಪೋಷಕರು ಸಹ ನಗರಕ್ಕೆ ಆಗಮಿಸಿದ್ದು ಶವನನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 
 
ನಿರೋಶಾಗೆ ಇನ್ನೆರಡು ತಿಂಗಳಲ್ಲಿ ಮದುವೆ ನಿಶ್ಚಯವಾಗಿತ್ತು. ಅದು ಆಕೆಗೆ ಇಷ್ಟವಿರಲಿಲ್ಲ ಎಂದು ಸಹ ಹೇಳಲಾಗುತ್ತಿದೆ. ಆತ್ಮಹತ್ಯೆಗೆ ಒಂದು ನಿಮಿಷದ ಮುನ್ನ ಆಕೆ ಫೋನ್‌ನಲ್ಲಿ ಮಾತನಾಡುತ್ತಿದ್ದಳೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 
 
ರಾಮಗೋಪಾಲ್‌ಪೇಟ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ