ಹೌದು.. ಈ ಬಾರಿ ವಿದ್ಯಾ ಬೇಗಂ ಆಗೋದಕ್ಕೆ ತಯಾರಾಗಿದ್ದಾರೆ. ಮಹೇಶ್ ಭಟ್ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾ ಬೆಂಗಾಳಿ ಚಿತ್ರ ರಾಜ್ ಕಹಾನಿಯಲ್ಲಿ ವಿದ್ಯಾ ಬಾಲನ್ ಅವರು ಬೇಗಂ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ವೇಶ್ಯಾಗೃಹದ ಒಡತಿಯಾಗಿ ವಿದ್ಯಾ ಬಾಲನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಇದು ತುಂಬಾ ಚಾಲೆಂಜಿಂಗ್ ಪಾತ್ರವಾಗಿರೋದರಿಂದ ವಿದ್ಯಾ ಸಿನಿಮಾದ ಪಾತ್ರಕ್ಕಾಗಿ ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಹಾಗಾಗಿ ಸಿನಿಮಾದ ಬಗ್ಗೆ ಅವರಿಗೆ ಸಾಕಷ್ಟು ನಿರೀಕ್ಷೆಗಳಿವೆ.