ಮಹೇಶ್ ಭಟ್ ಮುಂದಿನ ಸಿನಿಮಾದಲ್ಲಿ ಬೇಗಂ ಆಗ್ತಿದ್ದಾರೆ ವಿದ್ಯಾ ಬಾಲನ್

ಮಂಗಳವಾರ, 9 ಫೆಬ್ರವರಿ 2016 (11:17 IST)
ತನಗೆ ಯಾವುದೇ ರೀತಿಯ ಪಾತ್ರಗಳನ್ನು ನೀಡಲಿ ಆ ಪಾತ್ರಕ್ಕೆ ಸರಿಯಾದ ನ್ಯಾಯ ನೀಡುತ್ತೇನೆ ಅಂತಾ ತೋರಿಸಿಕೊಟ್ಟ ನಟಿ ವಿದ್ಯಾ ಬಾಲನ್. ವಿದ್ಯಾ ಈಗಾಗಲೇ ಅನೇಕ ರೀತಿಯ ಪಾತ್ರಗಳನ್ನು ನಿರ್ವಹಿಸಿರುವ ವಿದ್ಯಾ ಮಾಡಿದ ಪಾತ್ರಗಳಿಗೆಲ್ಲಾ ಅಭಿಮಾನಿಗಳಿಂದ ಭೇಷ್ ಅನ್ನಿಸಿಕೊಂಡಿದ್ದಾರೆ. ಇದೀಗ ತಮ್ಮ ವೃತ್ತಿ ಬದುಕಿನ ಮತ್ತೊಂದು ವಿಭಿನ್ನ ಪಾತ್ರಕ್ಕೆ ರೆಡಿಯಾಗಿದ್ದಾರೆ ವಿದ್ಯಾ.


 
ಹೌದು.. ಈ ಬಾರಿ ವಿದ್ಯಾ ಬೇಗಂ ಆಗೋದಕ್ಕೆ ತಯಾರಾಗಿದ್ದಾರೆ. ಮಹೇಶ್ ಭಟ್ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾ ಬೆಂಗಾಳಿ ಚಿತ್ರ ರಾಜ್ ಕಹಾನಿಯಲ್ಲಿ ವಿದ್ಯಾ ಬಾಲನ್ ಅವರು ಬೇಗಂ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ವೇಶ್ಯಾಗೃಹದ ಒಡತಿಯಾಗಿ ವಿದ್ಯಾ ಬಾಲನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಇದು ತುಂಬಾ ಚಾಲೆಂಜಿಂಗ್ ಪಾತ್ರವಾಗಿರೋದರಿಂದ ವಿದ್ಯಾ ಸಿನಿಮಾದ ಪಾತ್ರಕ್ಕಾಗಿ ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಹಾಗಾಗಿ ಸಿನಿಮಾದ ಬಗ್ಗೆ ಅವರಿಗೆ ಸಾಕಷ್ಟು ನಿರೀಕ್ಷೆಗಳಿವೆ.
 
ಈಗಾಗಲೇ ಈ ಸಿನಿಮಾದ ಕೆಲಸಗಳು ಆರಂಭವಾಗಿದ್ದು ಸಿನಿಮಾಕ್ಕೆ ಉಳಿದ ನಟ ನಟಿಯರ ಆಯ್ಕೆಯೂ ನಡೆಯುತ್ತಿದೆಯಂತೆ. ಜೂನ್ ನಲ್ಲಿ ಸಿನಿಮಾ ಸೆಟ್ಟೇರುತ್ತಂತೆ. ಇನ್ನು ಈ ಹಿಂದೆ ವಿದ್ಯಾ ಬಾಲನ್ ಅಭಿನಯಿಸಿದ ಎಲ್ಲಾ ಸಿನಿಮಾಗಳಿಗಿಂತ ವಿಭಿನ್ನವಾಗಿ ಈ ಸಿನಿಮಾದಲ್ಲಿ ವಿದ್ಯಾ ಅವರನ್ನು ನೋಡಬಹುದಂತೆ.

ವೆಬ್ದುನಿಯಾವನ್ನು ಓದಿ