ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ಬಗ್ಗೆ ರಾಮ್ ಚರಣ್ ತೇಜಾ ಹೇಳಿದ್ದೇನು?

ಶನಿವಾರ, 21 ಏಪ್ರಿಲ್ 2018 (06:34 IST)
ಹೈದರಾಬಾದ್ : ನಟಿ ಶ್ರೀರೆಡ್ಡಿ ಅವರು ಕಾಸ್ಟಿಂಗ್ ಕೌಚ್ ವಿರೋಧಿಸಿ ಪ್ರತಿಭಟನೆ ನಡೆಸಿ, ನಂತರ ಅನೇಕರ ಹೆಸರನ್ನು ಹೊರಹಾಕಿದ್ದರು. ಈ ಬಗ್ಗೆ ಅನೇಕ ನಟರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರೆ, ಈ ಬಗ್ಗೆ ತೆಲುಗು ಸೂಪರ್ ಸ್ಟಾರ್ ರಾಮ್ ಚರಣ್ ತೇಜಾ ಅವರು ಯಾವುದೇ ಪ್ರತಿಕ್ರಿಯೆ ನಿಡಿರಲಿಲ್ಲ.


ಆದರೆ ಇದೀಗ ಈ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಸಿನಿಮಾ ರಂಗ ಒಂದು ಕುಟುಂಬ ವಿದ್ದಂತೆ. ಇಲ್ಲಿ ಮಹಿಳೆಯರನ್ನು ಹೆಚ್ಚಾಗಿ ಗೌರವಿಸಲಾಗುತ್ತದೆ. ಇದಾಗ್ಯೂ ಸಮಸ್ಯೆಗಳು ಉದ್ಭವಿಸಿದರೆ, ಕಾನೂನು ರೀತಿಯಲ್ಲಿ ಅವುಗಳನ್ನು ಬಗೆಹರಿಸಿಕೊಳ್ಳಬೇಕು, ಆದರೆ ಸುಖಾಸುಮ್ಮನೆ ಪಬ್ಲಿಸಿಟಿಗಾಗಿ ಈ ರೀತೀಯಾಗಿ ಕೆಟ್ಟ ನಾಟಕಗಳನ್ನು ಮಾಡುತ್ತಾ, ಸುಖಾಸುಮ್ಮನೆ ಬೇರೆಯವರ ಹೆಸರನ್ನು ತರುವುದು ಸರಿಯಲ್ಲ ಎಂದು ರಾಮ್ ಚರಣ್ ತೇಜಾ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ