ಕ್ಷಮೆ ಕೇಳಿ ಷರೀಫ್, ನಿಮಗೆ ನವಾಜ್ ಷರೀಫ್ ಎಂದು ಹೆಸರಿಟ್ಟವರಿಗೆ ಈ ಮೊದಲೇ ನಿಮ್ಮ ಗುಣಗಳ ಬಗ್ಗೆ ತಿಳಿದಿದ್ದರೆ ನಿಮಗೆ ಬೇ-ನವಾಜ್ ಶರೀರ್ ಎಂದು ಹೆಸರಿಡುತ್ತಿದ್ದರು, ಎಂದು ಶೋಲೆ ಸಿನಿಮಾ ಖ್ಯಾತಿಯ ಖಾನ್ ಸರಣಿ ಟ್ವೀಟ್ ಮಾಡಿದ್ದಾರೆ.
ನೀವು ಪ್ರಮಾದ್ ಎಸಗಿದ್ದೀರಿ. ಸೈನ್ಯ, ಸಂಸತ್ತು, ಜನರು ಸೇರಿದಂತೆ ಯಾರು ಕೂಡ ನನ್ನ ಮಾತನ್ನು ಕೇಳಲ್ಲ ಎಂಬುದನ್ನು ನೀವೇ ಒಪ್ಪಿಕೊಂಡಿರುತ್ತೀರಿ. ನಿಮ್ಮ ಕುಟುಂಬ ನಿಮ್ಮ ಮಾತನ್ನು ಕೇಳುತ್ತದೆ ಎಂದರೆ ಅದು ಆಶ್ಚರ್ಯಕರ ವಿಷಯವೇ ಸರಿ. ಹೀಗಿದ್ದಾಗಲೂ ಜಗತ್ತೆಲ್ಲ ಸುತ್ತಾಡುತ್ತ ಭಾರತದ ವಿರುದ್ಧ ದೂರಿದರೆ ಕೇಳುವವರು ಯಾರು? ಎಂದು ಖಾನ್ ಪ್ರಶ್ನಿಸಿದ್ದಾರೆ.
ಶಾರುಖ್ ಖಾನ್, ರಣದೀಪ್ ಹೂಡಾ, ರಿತೇಶ್ ದೇಶ್ಮುಖ್, ಮಧುರ್ ಭಂಡಾರ್ಕರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಉರಿ ದಾಳಿಯನ್ನು ಖಂಡಿಸಿದ್ದಾರೆ.