2014ರ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ಕಿಸಿ

ಶುಕ್ರವಾರ, 24 ಜನವರಿ 2014 (15:27 IST)
PR

ಮೇಷ

ನಿಮ್ಮ ಆಲೋಚನೆಗಳು ಸದಾ ಸಕಾರಾತ್ಮಕವಾಗಿರಲಿ. ಬೇರೆಯವರ ಟೀಕೆಗಳಿಗೆ ಕಿವಿಗೊಡದೆ ನಿಮ್ಮ ಕಾರ್ಯವನ್ನು ನಿರ್ವಹಿಸಿ.

ಕೆಲ ದಿನಗಳಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಪ್ರತಿ ವಿಷಯದಲ್ಲಿ ಮೌನವಹಿಸುವುದು ಸೂಕ್ತ.ಉದ್ಯೋಗ ಸಮಸ್ಯೆ ಶೀಘ್ರದಲ್ಲಿ ಅಂತ್ಯಗೊಳ್ಳಲಿದೆ.

ಇತರರ ಮನಮೋಯಿಸಲು ಹೋಗದೇ, ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇತರರನ್ನು ಹೀಯಾಳಿಸುವುದು ಬೇಡ. ಆರೋಗ್ಯದತ್ತ ಗಮನಹರಿಸುವುದು ಒಳ್ಳೆಯದು.


ಹಿರಿಯರ ಮಾತಿಗೆ ಗೌರವವಿರಲಿ. ನಿಷ್ಠೆ ಪ್ರಾಮಾಣಿಕತೆಯಿಂದ ಉದ್ಯೋಗದಲ್ಲಿ ತೊಡಗಿಸಿಕೊಳ್ಳಿ.ಸಹದ್ಯೋಗಿಗಳ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಪ್ರತ್ಯೇಕವಾಗಿರಲು ಬಯಸಬೇಡಿ.

ಹುದ್ದೆಯಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ನೆರೆಹೊರೆಯವರ ಜೊತೆ ಬಾಂಧವ್ಯ ಉತ್ತಮವಾಗಿರಲಿ ಹಣಕಾಸಿನ ವ್ಯವಹಾರಗಳ ಬಗ್ಗೆ ಎಚ್ಚರ. ವಿದೇಶ ಪ್ರಯಾಣ ಯೋಗವಿದೆ.

ಪ್ರಯಾಣದಲ್ಲಿ ಎಚ್ಚರವಿರಲಿ. ವಾಹನ ಚಾಲನೆಯಲ್ಲಿ ಜಾಗೃತೆಯಿರಲಿ. ಕೋಪದ ಮೇಲೆ ಹಿಡಿತವಿರಲಿ. ಗೆಳತಿಯ ಮುಂದೆ ಮನಬಿಚ್ಚಿ ಮಾತನಾಡುವುದು ಒಳಿತು. ಪ್ರೇಮಿಗಳಿಗೆ ಶುಭಯೋಗ.

ಪರಸ್ಪರರ ಬಗ್ಗೆ ಗೌರವವಿರಲಿ. ಮಕ್ಕಳು ನಿಮ್ಮ ಗೌರವಕ್ಕೆ ಕುಂದು ತರಲಾರರು. ಮಕ್ಕಳ ಯೋಗಕ್ಷೇಮ ನೋಡುವುದನ್ನು ಮರೆಯಬೇಡಿ. ಸ್ನೆಹೀತರ ಸಹಾಯ ನಿಮಗೆ ದೊರೆಯಲಿದೆ.

ಪತಿ ಪತ್ನಿಯರಲ್ಲಿ ಪ್ರೇಮ ಉತ್ತಂಗಕ್ಕೆ ಏರಲಿದೆ. ರಾಜಕೀಯ ವರ್ಗದವರಿಗೆ ಉತ್ತಮ ಕಾಲ. ಕ್ರೀಡಾಪಟುಗಳಿಗೆ ಪ್ರತಿಭೆಯನ್ನು ಮೆರೆಯಲು ಸಕಾಲವಾಗಿದೆ.

ನಿಮ್ಮಿಂದ ದೂರವಾದವರು ಹತ್ತಿರವಾಗುತ್ತಾರೆ. ಪ್ರತಿಯೊಂದು ವಿಷಯದಲ್ಲಿ ಅವಸರ ಸಲ್ಲದು.ನಿಮ್ಮ ಗೆಳೆಯರಿಂದ ನೆರವು ದೊರೆಯಲಿದೆ. ಆರ್ಥಿಕವಾಗಿ ಎಚ್ಚರಿಕೆಯಿಂದಿರುವುದು ಸೂಕ್ತ.

ಕೃಷಿ ಕ್ಷೇತ್ರದವರಿಗೆ ಉತ್ತಮ ಲಾಭವಾಗಲಿದೆ. ಅಧಿಕಾರಿಗಳೊಂದಿಗೆ ಮಾತನಾಡುವಾಗ ಎಚ್ಚರದಿಂದ ವ್ಯವಹರಿಸಿ. ಹಣಕಾಸಿನ ತೊಂದರೆಯಿರುವುದಿಲ್ಲ.

ನೂತನ ವ್ಯವಹಾರಗಳ ಆರಂಭಕ್ಕೆ ಸಕಾಲ. ಶುಭಕಾರ್ಯದಲ್ಲಿ ಪಾಲ್ಗೊಳ್ಳುತ್ತೀರಿ. ಬರಬೇಕಾದ ಹಣ ನಿಗದಿತ ಸಮಯಕ್ಕೆ ಬರುವಲ್ಲಿ ವಿಳಂಬವಾಗುತ್ತದೆ.

ಕಬ್ಬಿಣ, ಸಿಮೆಂಟ್ ಮತ್ತು ಇಟ್ಟಿಗೆ ವ್ಯಾಪಾರಿಗಳಿಗೆ ಲಾಭದಲ್ಲಿ ಹೆಚ್ಚಳ. ಆಸ್ತಿಪಾಸ್ತಿ ಮಾರಾಟ ಮಾಡುವುದನ್ನು ಕೆಲ ಕಾಲ ತಡೆಯುವುದು ಸೂಕ್ತ.

PR
ವೃಷಭ

ಪ್ರತಿಯೊಂದು ವಿಷಯಗಳಲ್ಲಿ ಶಾಂತತೆಯಿಂದ ನಿರ್ವಹಿಸವುದು ಅಗತ್ಯ.ದೈವ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.ಕೆಲ ಜನರು ನಿಮ್ಮನ್ನು ಬಲಿಪಶುವನ್ನಾಗಿ ಮಾಡಲು ಪ್ರಯತ್ನಿಸುವ ಸಾಧ್ಯತೆಗಳಿವೆ.

ಇತರರೊಂದಿಗೆ ಎಚ್ಚರಿಕೆಯಿಂದ ವರ್ತಿಸುವುದು ಸೂಕ್ತ. ಆರ್ಥಿಕ ಒತ್ತಡಗಳು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಹಣಕಾಸಿನ ವ್ಯವಹಾರದ ಮೇಲೆ ಹಿಡಿತವಿರಲಿ.

ಶುಭಕಾರ್ಯಗಳಲ್ಲಿ ಹೆಚ್ಚಿನ ಹಣವ್ಯಯವಾಗುವುದರಿಂದ ಎಚ್ಚರಿಕೆ ಅಗತ್ಯ. ಉತ್ಪಾದಕ ವಸ್ತುಗಳ ಮಾರಾಟದಲ್ಲಿ ಉತ್ತಮ ಲಾಭವಾಗುವ ಸಾಧ್ಯತೆಗಳಿವೆ.

ಕುಟುಂಬದ ಹಿರಿಯರ ಆರೋಗ್ಯದ ವಿಷಯದಲ್ಲಿ ಜಾಗೃತೆಯಿರಲಿ. ನಿಮ್ಮ ವ್ಯಯಕ್ತಿಕ ವಿಷಯಗಳನ್ನು ಇತರರೊಂದಿಗೆ ವ್ಯವಹರಿಸಬೇಡಿ. ಇದರಿಂದ ಅನಾವಶ್ಯಕ ತೊಂದರೆಗಳು ಎದುರಾಗುವ ಸಾಧ್ಯತೆಗಳಿವೆ.

ಕುಟುಬಂದಲ್ಲಿ ನೆಮ್ಮದಿ ದೊರೆಯಲಿದೆ. ಮಕ್ಕಳಿದೆ ಹೆಚ್ಚಿನ ಪ್ರೀತಿ ತೋರಿಸುವುದು ಅಗತ್ಯ. ರಹಸ್ಯ ವಿಷಯಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ. ನಿಮ್ಮ ಅನಿಸಿಕೆಗಿಂತ ಹೆಚ್ಚಿನ ಹಣ ಖರ್ಚಾಗಲಿದೆ.

ಪತಿಪತ್ನಿಯರಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ. ನೀವು ಪ್ರೀತಿಸಿದವರನ್ನು ಮದುವೆಯಾಗುವ ಸೌಭಾಗ್ಯವಿದೆ. ಸಿನಿಮಾ, ಸಾಂಸ್ಕ್ರತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳು ಲಾಭ್ಯವಾಗಲಿವೆ.

ನಿರುದ್ಯೋಗಿಗಳಿಗೆ ಶೀಘ್ರದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ಸ್ಥಿರ ಚರಾಸ್ಥಿ ವಿಷಯಗಳಲ್ಲಿ ಒಂದು ನಿರ್ಣಯಕ್ಕೆ ಬರಲು ಅವಕಾಶವಿದೆ.

ರಿಯಲ್‌ ಎಸ್ಟೇಟ್ ಉದ್ಯಮಿಗಳಿಗೆ ಹಾಗೂ ಬ್ರೋಕರ್‌ಗಳಿಗೆ ಕಡಿಮೆ ಲಾಭ ದೊರೆಯಲಿದೆ. ತರಕಾರಿ ಸಿಮೆಂಟ್, ಉಕ್ಕು ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಗಳಿವೆ.

ಡಾಕ್ಟರ ವೃತ್ತಿಯವರು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ನೀವು ಅಂದುಕೊಂಡಿದ್ದನ್ನು ಸಾಧಿಸುತ್ತೀರಿ. ನಿಮ್ಮ ಪ್ರೀತಿ ಪಾತ್ರರಾದವರೊಂದಿಗೆ ದೂರದ ಪ್ರಯಾಣದ ಯೋಗವಿದೆ.

ಟ್ರಾನ್ಸಪೋರ್ಟ್, ಅಟೋಮೊಬೈಲ್, ಸಿನಿಮಾ ರಂದವರಿಗೆ ಒಳ್ಳೆಯ ಶುಭಯೋಗವಿದೆ. ನಿಮಗೆ ಸನ್ಮಾನ ಗೌರವಗಳು ಲಭಿಸುತ್ತವೆ.

ವಿದ್ಯಾಸಂಸ್ಥೆಗಳ ನಿರ್ಮಾತ್ಯರಿಗೆ ಹೊಸ ಆಲೋಚನೆಗಳು ಎದುರಾಗುತ್ತವೆ. ನಿಮ್ಮ ಏಳಿಗೆ ನೋಡಿ ಇತರರು ಹೊಟ್ಟೆ ಕಿಚ್ಚುಪಡುವ ಸಾಧ್ಯತೆಗಳಿವೆ.

PR
ಮಿಥುನ

ನಿರುದ್ಯೋಗಿಗಳಿಗೆ ಶೀಘ್ರದಲ್ಲಿ ಉದ್ಯೋಗ ದೊರೆಯುವ ಅವಕಾಶಗಳಿವೆ. ಮನೆಗೆ ಬಂಧುಮಿತ್ರರ ಆಗಮನ ಹೆಚ್ಚಾಗುತ್ತದೆ.

ಎಲೆಕ್ಟ್ರಾನಿಕ್, ಕಂಪ್ಯೂಟರ್‌ ಕ್ಷೇತ್ರವರಿಗೆ ಹೆಚ್ಚಿನ ಆದ್ಯತೆ, ಗೌರವ ದೊರಲಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ನಡೆಸಿದಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿವೆ.


ನ್ಯಾಯಾಲಯದಲ್ಲಿರುವ ಪ್ರಕರಣಗಳು ನಿಮ್ಮ ಪರವಾಗಿ ಗೆಲುವನ್ನು ತರುತ್ತವೆ. ಆರ್ಥಿಕ ವಿಷಯದಲ್ಲಿ ಎಚ್ಚರಿಕೆಯಿಂದಿರುವುದು ಸೂಕ್ತ. ನಿಮ್ಮ ಕೆಲಸಗಳು ಸಂಪೂರ್ಣವಾಗಿ ನೆರವೇರಲಿವೆ.

ನಿಮ್ಮ ಕುಟುಂಬದ ಹಿರಿಯರ ಸಲಹೆಗಳನ್ನು ನಿರ್ಲಕ್ಷಿಸಬೇಡಿ. ವ್ಯಾಪಾರಸ್ಥರಿಗೆ ಉತ್ತಮ ಕಾಲ. ಇತರರೊಂದಿಗೆ ಮುಕ್ತವಾಗಿ ಬೆರೆಯವುದನ್ನು ನಿಲ್ಲಿಸಿದಲ್ಲಿ ಒಳ್ಳೆಯದು.

ಆದರ್ಶ ವ್ಯಕ್ತಿಗಳನ್ನು ಮಾತ್ರ ಹತ್ತಿರಕ್ಕೆ ಸೇರಿಸಿ. ಪ್ರಯಾಣದಲ್ಲಿ ಎಚ್ಚರಿಕೆಯಿಂದಿರುವುದು ಸೂಕ್ತ. ವಾಹನ ಚಾಲನೆಯಲ್ಲಿ ಜಾಗೃತೆ ಅವಶ್ಯ. ದೂರದ ಪ್ರಯಾಣದಲ್ಲಿ ಜಯ ಲಭಿಸುತ್ತದೆ.

ವೈದ್ಯ ವೃತ್ತಿ ಹಾಗೂ ಸಿನಿಮಾ ಕ್ಷೇತ್ರದವರಿಗೆ ಸೂಕ್ತ ಕಾಲ. ಗೆಳೆಯರಿಂದ ನಿಮಗೆ ಸಹಾಯ ದೊರೆಯಲಿದೆ. ಪ್ರೀತಿಸುವವರ ಬಗ್ಗೆ ಎಚ್ಚರಿಕೆಯಿಂದಿರುವುದು ಸೂಕ್ತ.

ಪ್ರೇಮಿಗಳಿಗೆ ಮದುವೆಯಾಗುವ ಯೋಗ. ನಿಮ್ಮ ವಿರೋಧಿಗಳು ನಿಮ್ಮ ಸ್ನೇಹ ಬಯಸಿ ಬರುತ್ತಾರೆ. ಅಂತಹವರ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಸ್ಟೇಷನರಿ, ಪ್ರಿಂಟಿಂಗ್, ಪತ್ರಿಕೋದ್ಯಮ ಕ್ಷೇತ್ರದವರಿಗೆ ಕೆಲಸದ ಒತ್ತಡ ತಪ್ಪದು. ಬಂಗಾರ ಬೆಳ್ಳಿ, ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ.

ಹಣಕಾಸು ಸಂಸ್ಥೆಗಳು ಚಿಟ್‌ಫಂಡ್ ಸಂಸ್ಥೆಗಳ ವ್ಯಾಪಾರಿಗಳಿಗೆ ಆರ್ಥಿಕ ತೊಂದರೆ ಎದುರಾಗುವ ಸಾಧ್ಯತೆಗಳಿವೆ. ಹಣಕಾಸಿನ ವ್ಯವಹಾರವನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ಸೂಕ್ತ.

ಇತರರ ನಿಮ್ಮ ಮೇಲೆ ಅಪವಾದ ಹೊರಿಸುವ ಸಾಧ್ಯತೆಗಳಿರುವುದರಿಂದ ಇತರರನ್ನು ಹತ್ತಿರಕ್ಕೆ ಸೇರಿಸಬೇಡಿ. ಬಂಧುವರ್ಗದವರಿಂದ ಪ್ರಶಂಸೆ, ಆತ್ಮಿಯರಿಂದ ನಿಮ್ಮ ಬಗ್ಗೆ ಗೌರವ ಹೆಚ್ಚಾಗುತ್ತದೆ.

ವಿದೇಶದಲ್ಲಿ ಅಭ್ಯಾಸ ಮಾಡಬೇಕೆನ್ನು ನಿಮ್ಮ ಹಂಬಲ ಶೀಘ್ರದಲ್ಲಿ ನೆರವೇರಲಿದೆ. ಹೊಸ ಗೆಳೆಯರೊಂದಿಗೆ ಗೆಳೆತನ ಆರಂಭವಾಗುತ್ತದೆ.

ಏಕಾಗ್ರತೆಯಿಂದ ಕಾರ್ಯನಿರ್ವಹಿಸಿದಲ್ಲಿ ಯಶಸ್ವಿಯಾಗಲಿದ್ದೀರಿ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಅಪಘಾತವಾಗುವ ಸಾಧ್ಯತೆಗಳಿವೆ.

ನಿಮ್ಮ ಹೊಸ ಆಲೋಚನೆಗಳು ಕಾರ್ಯರೂಪಕ್ಕೆ ಬಂದಲ್ಲಿ ಸಫಲವಾಗುತ್ತವೆ. ಆಸ್ತಿ ವಿವಾದಗಳಿಂದ ಆದಷ್ಟು ದೂರವಿರಲು ಪ್ರಯತ್ನಿಸಿ. ಕ್ರೀಡಾಕ್ಷೇತ್ರವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.

PR
ಕರ್ಕಾಟಕ

ನಿಮ್ಮ ಆದಾಯಗಿಂತ ವೆಚ್ಚ ಹೆಚ್ಚಾಗುವ ಸಾಧ್ಯತೆಗಳಿವೆ. ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರುವುದು ಸೂಕ್ತ.

ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಹಾಗೂ ಬ್ರೋಕರ್‌ಗಳಿಗೆ ಕಡಿಮೆ ಲಾಭವಾಗಲಿದೆ. ನಿಮ್ಮ ಮನದಾಸೆಗಳು ಪೂರ್ತಿಯಾಗಲಿವೆ. ಸದಾ ಇತರರನ್ನು ಹಳಿಯಬೇಡಿ.

ನಿಮ್ಮ ಎಳಿಗೆಯತ್ತ ಗಮನಹರಿಸಿ. ನೀವು ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ನಿಮಗೆ ಗೌರವ ಪ್ರಾಪ್ತಿಯಾಗಲಿದೆ. ನಿಮ್ಮ ನಿರೀಕ್ಷೆಗಳು ಸಫಲವಾಗಲಿವೆ.

ಸರಕಾರಿ ನೌಕರರಿಗೆ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ.

ಉತ್ತರಾರ್ಧದಲ್ಲಿ ಬರಲಿರುವ ಕೆಲವು ಶುಭ ಸುದ್ದಿಗಳು ನಿಮ್ಮ ಮನಸ್ಥಿತಿಯನ್ನು ಪ್ರಫುಲ್ಲಗೊಳಿಸುತ್ತದೆ. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ.

ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ ಮತ್ತು ಹೆಜ್ಜೆಗಳು ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಇತರರು ನಿಮ್ಮ ಸಮಯವನ್ನು ಯಾಚಿಸುತ್ತಿರುವುದರಿಂದ ನಿಮ್ಮ ಸ್ವಂತ ಇಚ್ಛೆಗಳಿಗಾಗಿ ಕಾಯಬೇಕಾಗಬಹುದು. ಆದರೆ ಸುಲಲಿತ ಸಾಮಾಜಿಕ ಬಾಂಧವ್ಯವನ್ನು ಸವಿಯುವತ್ತ ಗಮನ ಕೊಡಿ.

ಪ್ರಚೋದನೆಗೊಳ್ಳದಿರಿ ಮತ್ತು ಸ್ವಾರ್ಥಿಗಳಾಗದಿರಿ.ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ನ್ಯಾಯ ವ್ಯವಹಾರಗಳಲ್ಲಿ ಗೆಲುವು ಗಳಿಸಲಿದ್ದೀರಿ.

ನಿಮ್ಮ ಧನಾತ್ಮಕ ಚಿಂತನೆಯು ನಿಮ್ಮನ್ನು ಇತರರಿಗಿಂತ ಮುಂದೆ ತಂದು ಸಲ್ಲಿಸುತ್ತದೆ. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ ಮತ್ತು ಸಹೋದ್ಯೋಗಿಗಳೊಂದಿಗೆ ವಾಗ್ವಾದ ಮಾಡುವುದರಿಂದ ದೂರವಿರಿ.

ನಿಮ್ಮ ಮೇಲಧಿಕಾರಿಗಳು ಮತ್ತಿತರ ಅಧಿಕಾರಿವರ್ಗವು ಸವಾಲು ಎದುರಿಸುವಲ್ಲಿ ಅಥವಾ ಸಮಸ್ಯೆಯನ್ನು ವಿನೂತನ ರೀತಿಯಲ್ಲಿ ಪರಿಹರಿಸುವ ಕುರಿತ ನಿಮ್ಮ ಆಕಾಂಕ್ಷೆ ಮತ್ತು ಆತ್ಮವಿಶ್ವಾಸಕ್ಕೆ ಪೂರಕವಾಗಿ ಪ್ರತಿಕ್ರಿಯಿಸುತ್ತಾರೆ.

PR
ಸಿಂಹ

ಹಣಕಾಸಿನ ವ್ಯವಹಾರಗಳನ್ನು ಸೂಕ್ತವಾಗಿ ವ್ಯವಹರಿಸಿದಲ್ಲಿ ಆರ್ಥಿಕ ತೊಂದರೆಗಳಿರುವುದಿಲ್ಲ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅತ್ಯಗತ್ಯ.

ನಿಮ್ಮ ಮನೋಭಿಲಾಷೆಗಳು ಈಡೇರಲಿವೆ. ನೀವು ಪ್ರೀತಿಸಿದವರೊಂದಿಗೆ ಮದುವೆಯಾಗಲಿದೆ. ನಿಮ್ಮ ಪ್ರೇಮಿಯ ಮನವನ್ನು ಗೆಲ್ಲಲು ಪ್ರಯತ್ನಿಸಿ.

ಸರಕಾರಿ ಹಾಗೂ ಖಾಸಗಿ ನೌಕರರಿಗೆ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ದೊರೆಯುಲಿದೆ. ಇತರರಿಗೆ ನಿಮ್ಮ ವ್ಯಯಕ್ತಿಕ ವಿಷಯಗಳ ಬಗ್ಗೆ ಪ್ರಸ್ತಾಪಿಸಬೇಡಿ.

ರಹಸ್ಯ ವಿತಾರಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ. ಕುಟುಂಬದಲ್ಲಿ ಪ್ರೇಮ ಅನುರಾಗಗಳು ಹೆಚ್ಚಾಗುತ್ತವೆ.

ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ, ಸ್ತ್ರೀಯರಿಂದ ಆರ್ಥಿಕ ಹಾನಿಯಾಗುವ ಸಾಧ್ಯತೆಗಳಿರುವುದರಿಂದ ದೂರವಿರಲು ಪ್ರಯತ್ನಿಸಿ.

ಸೃಜನಾತ್ಮಕತೆ ಹಾಗೂ ಸಮಯಸ್ಪೂರ್ತಿ ತೋರುವುದರಿಂದ ನಿಮಗೆ ಗೌರವಗಳು ಹೆಚ್ಚಾಗುವ ಸಾಧ್ಯತೆಗಳಿವೆ. ರಾಜಕೀಯ ವರ್ಗದವರಿಗೆ ತಮ್ಮ ಆಶೆಗಳನ್ನು ಈಡೇರಿಸಲು ಇದು ಸಕಾಲ.

ಚುನಾವಣೆಯಲ್ಲಿ ಗೆಲುವು ನಿಮ್ಮದಾಗುವ ಸಾಧ್ಯತೆಗಳಿವೆ. ಜನರೊಂದಿಗೆ ಬೆರೆಯುವುದನ್ನು ಮರೆಯಬೇಡಿ.ನಿಮ್ಮ ಸುತ್ತಲ ವಾತಾವರಣವು ಸಂತಸದಾಯಕವಾಗಿರುತ್ತದೆ.

ಕುಟುಂಬದವರ ನೆರವು ಪ್ರಾಪ್ತವಾಗುತ್ತದೆ. ಹೊಸ ವಾಹನ ಖರೀದಿಸಲು ನೀವು ಯೋಚಿಸಬಹುದು. ನಿಮ್ಮ ಸಂಗಾತಿಯಿಂದ ಸಂತೋಷ ಸಿಗುತ್ತದೆ.

ಸುಖದಾಯಕ ಕೆಲಸಗಳನ್ನು ಮಾಡುವುದರಲ್ಲಿ ನೀವು ನಿರತರಾಗಲಿದ್ದೀರಿ. ಮನರಂಜನೆಗಾಗಿ ಯೋಚಿಸುವ ಸಮಯ ಇದು.

ನಿಮ್ಮ ಕಾರ್ಯಸ್ಥಳದಲ್ಲಿ ಅನುಕೂಲಕರ ಗಳಿಗೆ ಸದ್ಯದಲ್ಲೇ ಆರಂಭವಾಗಲಿದೆ. ನೀವೀಗ ಹೆಚ್ಚು ಸಮರ್ಥರಾಗಿದ್ದೀರಿ. ಪರಸ್ಪರ ಕಾಳಜಿಗಳ ಬಗ್ಗೆ ಪಾಲುದಾರರು ಸಂತಸದ ಒಪ್ಪಿಗೆ ನೀಡುತ್ತಾರೆ.

ನಿಮ್ಮ ವ್ಯವಹಾರ ವರ್ಧನೆಗೆ ಇದು ಸಕಾಲ.ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ.

ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಸಿಂಹ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ.

PR
ಕನ್ಯಾ

ಆರ್ಥಿಕ ವಿಷಯದಲ್ಲಿ ನಿಮಗೆ ಹೆಚ್ಚಿನ ಲಾಭವಾಗಲಿದೆ. ನಿಮ್ಮ ಕುಟುಂಬದ ವಿಚಾರದಲ್ಲಿ ನೆಮ್ಮದಿಯಿರುವುದರಿಂದ ಶುಭ ಕಾರ್ಯಗಳು ನಡೆಯುತ್ತವೆ. ಉತ್ತಮ ಆರೋಗ್ಯವಿದೆ.

ಗುರುಹಿರಿಯರನ್ನು ಗೌರವಿಸುವುದನ್ನು ಮರೆಯಬೇಡಿ. ಸಕಾಲದಲ್ಲಿ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿವೆ. ನಿಮಗೆ ಉತ್ತಮ ಒಳ್ಳೆಯ ಸಂಗಾತಿ ದೊರೆಯುವ ಸಾಧ್ಯತೆಗಳಿವೆ.

ಆದಷ್ಟು ದುಷ್ಟ ವ್ಯಕ್ತಿಗಳಿಂದ ದೂರವಿರಲು ಪ್ರಯತ್ನಿಸಿ. ಇಲ್ಲವಾದಲ್ಲಿ ಅಪವಾದಗಳು ನಿಮ್ಮನ್ನು ಸುತ್ತುವರಿಯಲಿವೆ. ಅಧ್ಯಾತ್ಮಕತೆ ಮತ್ತು ದೈವ ಭಕ್ತಿಯತ್ತ ಒಲವು ತೋರುತ್ತೀರಿ.

ಕಿರಾಣಾ, ಫ್ಯಾನ್ಸಿ ಕ್ಷೇತ್ರವರಿಗೆ ಹೆಚ್ಚಿನ ಲಾಭವಾಗುವ ಅವಕಾಶಗಳಿವೆ.ನಿಮ್ಮ ರಾಶಿಯಲ್ಲಿ ಶನಿಯಿದ್ದರೂ ಅದರಿಂದ ನಿಮಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ.

ಸರಕಾರಿ ನೌಕರರರಿಗೆ ಟೀಕೆಗಳು ತಪ್ಪವು. ನಿಮ್ಮಲ್ಲಿರುವ ಆಂತರಿಕ ಸಮಸ್ಯೆಗಳು ತನ್ನಿಂದ ತಾನೇ ದೂರಾಗಲಿವೆ. ಹಣಕಾಸು ಸಂಸ್ಥೆಗಳ ವಹಿವಾಟುದಾರರಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಗಳಿವೆ.

ನೀವೀಗ ಮನಸ್ಸಿನ ಆಶಾವಾದಿ ಚೌಕಟ್ಟಿನಲ್ಲಿದ್ದೀರಿ, ಆದರೆ ಸುವಸ್ತುಗಳಿಗಾಗಿ ನೀವು ದುಂದುವೆಚ್ಚಕ್ಕೆ ಮುಂದಾಗುವ ಸಾಧ್ಯತೆಗಳಿವೆ. ಪ್ರಣಯ ಸಲ್ಲಾಪಕ್ಕೆ ಈ ವರ್ಷ ಧನಾತ್ಮಕ ಅವಕಾಶವಿದೆ.

ನೀವೀಗ ಆತ್ಮವಿಶ್ವಾಸಿಗಳಾಗಿದ್ದೀರಿ ಮತ್ತು ನಿಮ್ಮ ಯಶಸ್ಸಿನ ಅವಕಾಶಗಳನ್ನು ರಿಯಾಗಿಯೇ ಬಳಸಿಕೊಳ್ಳಿ. ಹಿಂದೆಂದಿಗಿಂತಲೂ ನೀವೀಗ ಹೆಚ್ಚು ಆಕರ್ಷಣೀಯವಾಗಿದ್ದೀರಿ.

ನೀವು ಮತ್ತು ನೀವೇನನ್ನು ವಿಶೇಷವಾಗಿ ಹೇಳಬಯಸುತ್ತೀರೋ, ಅವೆಲ್ಲವೂ ಸಂಗಾತಿ ಅಥವಾ ಪಾಲುದಾರರನ್ನು ಸಂಮೋಹಿನಿಗೀಡಾಗಿಸುತ್ತವೆ.

ನೀವು ರಂಜನೆ ಪಡೆಯಬೇಕಿದ್ದರೆ ಮತ್ತು ಇತರರನ್ನೂ ಸತ್ಕರಿಸಬೇಕೆಂದಿದ್ದರೆ, ಬೆರೆಯಿರಿ, ದೂರ ಹೋಗದಿರಿ.ದಿನದ ಹಣಕಾಸು ಬೆಳವಣಿಗೆಗಳು ನಿಮಗೆ ಸಂತಸ ತರುತ್ತವೆ, ಆದರೆ ಜಾಣ್ಮೆಯಿಲ್ಲದೆ ಸಾಲ ವಿಷಯವನ್ನು ಬಳಸಿಕೊಳ್ಳದಿರಿ.

PR
ತುಲಾ

ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದೆ. ಪರೀಕ್ಷೆ ಸಮಯದಲ್ಲಿ ಏಕಾಗ್ರತೆ ಅಗತ್ಯ. ಕೃಷಿ ಉದ್ಯೋಗಿಗಳಿಗೆ ಉತ್ತಮ ಲಾಭ. ಗುತ್ತಿಗೆದಾರರಿಗೆ ,ಅಥಿಕಾರಿಗಳಿಗೆ ಶುಭ ಯೋಗವಿದೆ.

ಹೊಸ ಗೆಳೆಯರ ಪರಿಚಯದಿಂದ ನಿಮಗೆ ಸಂತೃಪ್ತಿ ದೊರೆಯಲಿದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.ಹಿರಿಯರ ಮಾತನ್ನು ಗೌರವಿಸಿ. ಹಣಕಾಸಿನ ವೆಚ್ಚದ ಬಗ್ಗೆ ಹಿಡಿತವಿರಲಿ.

ರಾಜಕೀಯ ವರ್ಗದವರಿಗೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸಕಾಲ. ಸರಕಾರ ಹಾಗೂ ಖಾಸಗಿ ನೌಕರರಿಗೆ ನೆಮ್ಮದಿಯ ಕಾಲ. ವರ್ಗಾವಣೆಗಳಿಂದ ಕೆಲ ಕಾಲ ಆತಂಕ.

ನಿಮ್ಮ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ. ನಿರುದ್ಯೋಗಿಗಳಿಗೆ ಉತ್ತಮ ಶುಭಯೋಗ ದೂರದಿಂದ ಕರೆ ಬರುವ ಸಾಧ್ಯತೆಗಳಿವೆ. ಇತರರ ಟೀಕೆಗಳಿಗೆ ಗಮನಹರಿಸದಿರಿ.

ನಿಮ್ಮ ಏಳಿಗೆಯನ್ನು ಸಹಿಸಿದ ಕೆಲ ವ್ಯಕ್ತಿಗಳು ನಿಮ್ಮ ಮೇಲೆ ಅಪವಾದ ಹೊರಿಸುವ ಸಾಧ್ಯತೆಗಳಿವೆ. ಮನೆಗೆ ಸಂಬಂಧಿಸಿದ ಹೊಣೆಗಾರಿಕೆಗಳ ಬೆಳವಣಿಗೆ ಬಗ್ಗೆ ನೀವು ಸಂತಸ ಹೊಂದುತ್ತೀರಿ.

ಆದರೂ ಹಣಕಾಸು ಒಪ್ಪಂದಗಳಿಗೆ ಇದು ಸೂಕ್ತ ಸಮಯ. ವಾಗ್ವಾದದಿಂದ ದೂರವಿರಿ. ವಿಶೇಷವಾಗಿ ಗೃಹ ಸಂಬಂಧಿತ ಎಲ್ಲಾ ಸಂಗತಿಗಳು ಪೂರ್ಣಗೊಳ್ಳಬೇಕು ಎಂಬ ಮನೋಭಾವದೊಂದಿಗೆ ಗಂಭೀರವದನರಾಗಿರುತ್ತೀರಿ.

ನೀವು ಸಾಧಿಸಬೇಕೆಂದಿರುವ ವೃತ್ತಿ ಗುರಿಗಳತ್ತ ನೀವು ಕಣ್ಣುಹಾಯಿಸಲಿದ್ದೀರಿ. ನಿಮ್ಮ ಮನಸ್ಸಿನಲ್ಲಿರುವ ಹೊಸ ಯೋಜನೆಗಳ ಬಗ್ಗೆ ಈಗಾಗಲೇ ನೀವು ಉತ್ತೇಜಿತರಾಗಿದ್ದೀರಿ.

ನಿಮ್ಮ ಸಾಮರ್ಥ್ಯದ ಬಗ್ಗೆ ನೀವು ಹೆಚ್ಚು ಭರವಸೆಯಿಂದಿರುತ್ತೀರಿ. ಎದುರಾಗುವ ಸಮಸ್ಯೆಯೊಂದು, ನಿಮ್ಮ ಸಕಾಲಿಕ ಮಧ್ಯಪ್ರವೇಶದಿಂದ ತ್ವರಿತ ಪರಿಹಾರ ಕಾಣುತ್ತದೆ.

ವಿರುದ್ಧ ಲಿಂಗದವರ ಮೇಲೆ ಒಂದು ರೀತಿಯ ಪ್ರಬಲ ಆಕರ್ಷಣೆ ಅನುಭವಿಸುತ್ತೀರಿ. ಭಾವಾವೇಶಗಳಿಗೆ ನಿಮ್ಮ ಮನಸ್ಸು ಮಣಿಯಲು ಅವಕಾಶ ನೀಡಬೇಡಿ.

ಭಾವನೆಗಳನ್ನು ನಿಯಂತ್ರಣದಲ್ಲಿರಿಸಿ, ಇಲ್ಲದಿದ್ದರೆ ಆತಂಕದ ಸನ್ನಿವೇಶ ಎದುರಿಸಬೇಕಾಗುತ್ತದೆ.ವಿಶಿಷ್ಟ, ಆಕರ್ಷಕ ಮತ್ತು ಉಲ್ಲಸಿತ ವ್ಯಕ್ತಿಯೊಬ್ಬರು ನಿಮಗೆ ಸಿಗಬಹುದು.

ಹಣಕಾಸು ವಿಷಯಗಳ ಸಂಬಂಧದಲ್ಲಿ ನಿಧಾನಗತಿ ಪ್ರಕ್ರಿಯೆಗಳಿಗೆ ತಯಾರಾಗಿರಿ.ಸೌಂದರ್ಯದತ್ತ ನೀವು ಆಕರ್ಷಿತರಾಗುತ್ತೀರಿ.

ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ಸನ್ನಿವೇಶಗಳು ನಿಮ್ಮ ವಿಶ್ವಾಸವನ್ನು ವೃದ್ಧಿಸುತ್ತವೆ.

ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸಗಳಲ್ಲಿ ಸಫಲತೆ ಕಾಣುತ್ತಾರೆ. ನಿಮ್ಮ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.

PR
ವೃಶ್ಚಿಕ

ಆದಾಯಗಿಂತ ವೆಚ್ಚದಲ್ಲಿ ಹೆಚ್ಚಳವಾಗಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು. ಆರೋಗ್ಯದಲ್ಲಿ ಜಾಗೃತೆ ವಹಿಸುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಉತ್ತಮ ಕಾಲ.

ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳು ಹೆಚ್ಚು. ಮನೆಯಲ್ಲಿ ಮದುವೆ ಕಾರ್ಯಗಳು ನಡೆಯಲಿವೆ.ಬಂಧುಮಿತ್ರರ ಆಗಮನ.

ಕುಟುಂಬದಲ್ಲಿ ಹಿರಿಯರ ಸಲಹೆಗಳಿಗೆ ಸ್ಪಂದಿಸಿ. ನ್ಯಾಯಾಲಯದ ಕಾರ್ಯಗಳನ್ನು ಮುಂದಕ್ಕೆ ಹಾಕುವುದು ಸೂಕ್ತ.

ಇತರರ ವಿಷಯದಲ್ಲಿ ಹಸ್ತಕ್ಷೇಪ ಬೇಡ. ಪರರನ್ನು ನಿಂದಿಸಲು ಹೋಗಬೇಡಿ. ಅವಸರದಲ್ಲಿ ಇತರರಿಗೆ ನೆರವಾಗಲು ಪ್ರಯತ್ನಿಸಬೇಡಿ. ಅಪವಾದಗಳು ಎದುರಾಗುವ ಸಾಧ್ಯತೆಗಳಿವೆ.

ನಿಮಗೆ ಎಲ್ಲಾ ಕಡೆಗಳಿಂದ ಹಣಕಾಸಿನ ನೆರವು ಹರಿದುಬರಲಿದೆ. ಸರಕಾರಿ ನೌಕರರಿಗೆ ವರ್ಗಾವಣೆ ಯೋಗವಿದೆ.

ಖಾಸಗಿ ಕೆಲಸದವರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ. ದೂರ ಪ್ರಯಾಣದ ಕಾರ್ಯಗಳು ಯಶಸ್ವಿಯಾಗಲಿವೆ.

ಮನೆಯಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ. ಸಕಾಲದಲ್ಲಿ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ಯಶಸ್ವಿಯಾಗುತ್ತೀರಿ.

ನಿಮ್ಮ ವ್ಯವಹಾರದಲ್ಲಿ ಅನುಕೂಲಕರ ಸಂದರ್ಭಗಳು ಬರಲಿವೆ. ನಿಮ್ಮ ಸಾಮಾಜಿಕ ಸ್ಥಾನಮಾನ ಮುಂಚಿನಂತೆಯೇ ಸ್ಥಿರವಾಗಿರುತ್ತದೆ.

ನೀವು ಕೆಲವು ಮುಖ್ಯ ಕಾರ್ಯಗಳನ್ನು ಪಡೆಯಲಿದ್ದೀರಿ, ಆದರೆ ತದನಂತರ ಅದರ ಬಗ್ಗೆ ಬಹಳ ಚಿಂತಿಸುವ ಸಾಧ್ಯತೆ ಹೆಚ್ಚು ಇದೆ.

ಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ. ಸರಿಯಾದ ದಾರಿಯಲ್ಲಿ ನಿಮ್ಮ ಉತ್ಸಾಹ ಮತ್ತು ಬುದ್ಧಿವಂತಿಕೆಯನ್ನು ಬಳಸಿದಲ್ಲಿ ಯಶಸ್ಸು ಖಂಡಿತ.

ನಿಮ್ಮ ಹಣಕಾಸು ಒಪ್ಪಂದಗಳ ವಿಷಯದಲ್ಲಿ ಜಾಗ್ರತೆಯಿಂದಿರಿ. ತೀರಾ ಕಷ್ಟಪಟ್ಟು ಕೆಲಸ ಮಾಡುವುದಕ್ಕೆ ಹೋಗಬೇಡಿ, ಇಲ್ಲದಿದ್ದರೆ ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುತ್ತೀರಿ.

ಪ್ರಮುಖ ಕೆಲಸಗಳಲ್ಲಿ ಇಂದು ನೀವು ಯಶಸ್ವಿಯಾಗುತ್ತೀರಿ. ಹೊಸ ಜವಾಬ್ದಾರಿಗಳು ದೊರೆಯುವ ಸಾಧ್ಯತೆ ಇದೆ.

ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರಿ ಮತ್ತು ಗೊಂದಲ ಮನಸ್ಥಿತಿ ಅಂತ್ಯಗೊಳ್ಳುತ್ತದೆ.

ನ್ಯಾಯಾಂಗ ಮತ್ತು ಹಣಕಾಸು ಪ್ರಕರಣಗಳಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ವಿರೋಧಿಗಳು ಮತ್ತು ಕಚೇರಿ ಸಹವರ್ತಿಗಳೂ ಕೂಡ ನಿಮ್ಮ ನೈತಿಕ ಬಲವನ್ನು ಒಪ್ಪಿಕೊಳ್ಳುತ್ತಾರೆ.

PR
ಧನು

ಗತಿಸಿ ಹೋದ ಕಾರ್ಯಗಳಿಗೆ ಚಿಂತಿಸಿ ಮೂಕಪ್ರೇಕ್ಷಕರಾಗುವುದು ಸರಿಯಲ್ಲ. ನಿಮಗೆ ಶುಭಯೋಗವಿರುವುದರಿಂದ ನಿಮ್ಮ ಕಾರ್ಯಗಳು ಸಫಲವಾಗಲಿವೆ.

ಅವಿವಾಹಿತರಿಗೆ ಶುಭಕಾಲವಾಗಿದೆ. ನೀವು ಅಂದುಕೊಂಡ ಕಾರ್ಯಗಳು ಯಾವುದೇ ವಿಘ್ನವಿಲ್ಲದೇ ನೆರವೇರಲಿವೆ.ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ.

ನಿಮ್ಮ ಧೈರ್ಯ ಸಾಹಸಗಳಿಂದ ಹೆಚ್ಚಿನ ಗೆಳೆಯರನ್ನು ಸಂಪಾದಿಸುತ್ತೀರಿ. ವಾಣಿಜ್ಯ ಕ್ಷೇತ್ರದವರಿಗೆ ಸಂಪೂರ್ಣ ತೃಪ್ತಿ ದೊರೆಯಲಿದೆ.

ಉದ್ಯೋಗಿಗಳು ತಮ್ಮ ಅವಸರದ ವರ್ತನೆಯಿಂದಾಗಿ ಹಿರಿಯ ಅಧಿಕಾರಿಗಳಿಂದ ತರಾಟೆಗೆ ಒಳಗಾಗುತ್ತೀರಿ.

ಕೃಷಿ ಕ್ಷೇತ್ರದವರಿಗೆ ಲಾಭ. ಹಣಕಾಸು , ಚಿಟ್‌ಫಂಡ್ ವ್ಯವಹಾರಸ್ಥರಿಗೆ ಉತ್ತಮ ಹಣಕಾಸಿನ ಲಾಭವಾಗಲಿದೆ.

ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿ ಗೆಲುವು ನಿಮ್ಮದಾಗಲಿದೆ. ರಿಯಲ್‌ ಎಸ್ಟೇಟ್‌ ಏಜೆಂಟ್‌ರಿಗೆ ಹಾಗೂ ಉದ್ಯಮಿಗಳಿಗೆ ಕಡಿಮೆ ಲಾಭ ಸಾಧ್ಯತೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ಸಿನಿಮಾ, ಸಾಂಸ್ಕ್ರತಿಕ ಕ್ಷೇತ್ರದ ಪ್ರತಿಭೆಗಳಿಗೆ ಉತ್ತಮ ಅವಕಾಶ. ಕೆಲವು ಮಹತ್ವದ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ.

ರಾಜಕಾರಣಿಗಳು ಅಥವಾ ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ತಮ್ಮ ಕೆಲಸಗಳಲ್ಲಿ ಯಶಸ್ವಿಯಾಗುತ್ತಾರೆ. ನಿಮ್ಮನ್ನು ಕೆಳಗೆ ಬೀಳಿಸುವ ವಿರೋಧಿಗಳ ಹುನ್ನಾರ ಸಫಲವಾಗುವುದಿಲ್ಲ.

ನಿಮ್ಮ ಇಚ್ಛೆಯ ಯೋಜನೆಗಳು ಮತ್ತು ವ್ಯವಹಾರಗಳಲ್ಲಿ ಯಶಸ್ಸು ಕಾಣುತ್ತೀರಿ. ಪರಿಸ್ಥಿತಿಗಳು ಇಂದು ನಿಮ್ಮ ಕಡೆ ವಾಲುತ್ತವೆ ಮತ್ತು ನಿಮ್ಮ ವೈಯಕ್ತಿಕ ಪ್ರಗತಿಗಾಗಿ ಹೊಸ ಮಾರ್ಗಗಳು ಗೋಚರಿಸಲಿವೆ.

PR
ಮಕರ

ದುಷ್ಟರಿಗೆ ಉಪಕಾರ ಮಾಡಲು ಹೋಗಬೇಡಿ ಇದರಿಂದ ನಿಮಗೆ ಅಪಾಯ ತರುವ ಸಾಧ್ಯತೆಗಳು ಹೆಚ್ಚು. ಅಷ್ಟಮ ಶನಿ ನಿಮಗೆ ಹಾನಿಕಾರಕವಲ್ಲ.

ವ್ಯವಹಾರದಲ್ಲಿ ಜಾಗೃತೆ ಅಗತ್ಯ. ಆರೋಗ್ಯ ಭಾಗ್ಯ ಉತ್ತಮ. ಮಾನಸಿಕ ನೆಮ್ಮದಿ, ಮನೆಯಲ್ಲಿ ನೆಮ್ಮದಿಯ ವಾತಾವರಣ. ಅವಿವಾಹಿತರಿಗೆ ಶುಭಯೋಗ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ.

ಸರಕಾರಿ ನೌಕರರಿಗೆ ವರ್ಗಾವಣೆಯೋಗ. ಶ್ರಮಜೀವಿಗಳಿಗೆ ಉತ್ತಮ ಧನಲಾಭ. ಏಜೆಂಟ್‌ರಿಗೆ , ಬ್ರೋಕರ್‌ಗಳಿಗೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಲಾಭದಲ್ಲಿ ಇಳಿಕೆ. ಆರ್ಥಿಕ ಸ್ಥಿತಿ ಉತ್ತಮ.

ನಿಮ್ಮ ಸೃಜನಾತ್ಮಕತೆ ಮತ್ತು ಉತ್ಸಾಹಗಳ ಅಗತ್ಯವಿರುವ ಕೆಲಸಗಳಲ್ಲಿ ಯಶಸ್ಸುಗಳಿಸುತ್ತೀರಿ. ದೈಹಿಕ ಆರೋಗ್ಯದ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಾಹನ ಚಾಲನೆ ಮಾಡುವಾಗ ಜಾಗ್ರತೆಯಿಂದಿರಿ.

ಕೌಟುಂಬಿಕ ವಿಷಯಗಳಲ್ಲಿ ಯಶಸ್ಸು ಕಾಣುತ್ತೀರಿ. ನಿಮ್ಮ ವ್ಯಾಪಾರ ವಿಷಯಗಳ ಸಂಬಂಧದಲ್ಲಿ ಕ್ಲಿಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಅಂತರಂಗದ ಭಾವನೆಗಳಿಗೆ ಆದ್ಯತೆ ನೀಡಿ.

ಹಿತವಾದ ಸುದ್ದಿಗಳು ನಿಮಗೆ ಸಂತಸ ತರುತ್ತವೆ. ಹಳೆಯ ಯೋಜನೆಗಳಲ್ಲಿ ಯಶಸ್ಸು ಕಾಣುತ್ತೀರಿ. ಆರೋಗ್ಯದ ಬಗ್ಗೆ ಗಮನ ಹರಿಸಿ. ಅನಿರೀಕ್ಷಿತ ಧನಲಾಭ ದೊರೆಯುವ ಸಾಧ್ಯತೆ ಇದೆ.

ನಿಮ್ಮ ವ್ಯವಹಾರಗಳಲ್ಲಿ ಸ್ನೇಹಿತರಿಂದ ನೆರವು ದೊರೆಯುತ್ತದೆ. ಪರಸ್ಪರ ವಿವಾದಗಳು ಅಂತ್ಯಗೊಳ್ಳಲಿವೆ.

ಆರೋಗ್ಯ ಅತ್ಯುತ್ತಮವಾಗಿಯೇ ಇರುತ್ತದೆ.ನಿಮ್ಮ ಸಂಗಾತಿಯಿಂದ ಅಮೂಲ್ಯ ನೆರವು ದೊರಕುತ್ತದೆ. ನಿಮ್ಮ ಹೃದಯಕ್ಕೆ ಹತ್ತಿರವಾದವರೊಂದಿಗೆ ರಸಭರಿತ ಸಂಜೆಯನ್ನು ಕಳೆಯಲು ಪ್ರಶಸ್ತವಾದ ವರ್ಷವಾಗಿದೆ.

ನಿಮ್ಮ ಸ್ವಂತ ಕೆಲಸವನ್ನು ನೀವು ಜರೂರಾಗಿ ಮಾಡಬೇಕಾಗುತ್ತದೆ. ನಿಮ್ಮ ಯೋಚನೆಗಳ ಬಗ್ಗೆ ಇತರರಿಗೆ ತಿಳಿಸದೇ ಮುಚ್ಚಿಡುವಂತಹ ಕೆಲಸ ಮಾಡಬೇಡಿ.

ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ.

PR
ಕುಂಭ

ನಿಮ್ಮ ಕೋಪ ನಿಮಗೆ ಶತ್ರವಾಗಲಿದೆ. ಸಹಕಾರ ಸಂಘಗಳ ಕ್ಷೇತ್ರದವರಿಗೆ ಉತ್ತಮ ಲಾಭ. ಸ್ತ್ರೀಯರು ಆರೋಗ್ಯದ ಬಗ್ಗೆ ಗಮನಹರಿಸುವುದು ಸೂಕ್ತ.

ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಎದುರಾಗಲಿವೆ. ಆರ್ಥಿಕ ಒತ್ತಡಗಳು ಎದುರಾಗುವ ಸಾಧ್ಯತೆಗಳಿರುವುದರಿಂದ ಅನಗತ್ಯ ವೆಚ್ಚದಲ್ಲಿ ಕಡಿಮೆ ಮಾಡುವುದು ಸೂಕ್ತ. ಕೃಷಿ ಕ್ಷೇತ್ರದವರಿಗೆ ಉತ್ತಮ ಧನಲಾಭ.

ಅವಿವಾಹಿತರಿಗೆ ವಿವಾಹಯೋಗ. ಬಂಗಾರ ಬೆಳ್ಲಿ ವ್ಯಾಪಾರಿಗಳಿಗೆ ಉತ್ತಮ ಲಾಭ ನಿರೀಕ್ಷೆ. ಸರಕಾರ ನೌಕರರಿಗೆ ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಬಡ್ತಿಯೋಗ.

ನಿಮ್ಮ ಮನದಾಳದ ಮಾತುಗಳನ್ನು ಇತರರ ಮುಂದೆ ಬಹಿರಂಗಪಡಿಸಬೇಡಿ. ನಿಮ್ಮ ಮನದ ಆಸೆಗಳು ಈ ವರ್ಷದಲ್ಲಿ ಈಡೇರಲಿವೆ. ಟೀಕೆಗಳಿಗೆ ಹೆದರದೆ ಸಕರಾತ್ಮಕವಾಗಿ ಮುಂದುವರಿಯಿರಿ.

ಸಾಫ್ಟ್‌ವೇರ್ ಕ್ಷೇತ್ರದ ಉದ್ಯೋಗಿಗಳಿಗೆ ಕೆಲಸದ ಒತ್ತಡ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಹಣಕಾಸಿನ ತೊಂದರೆ ಎದುರಾಗುವ ಸಾಧ್ಯತೆಗಳು ಕಡಿಮೆ. ದುಂದುವೆಚ್ಚ ಬೇಡ.

ಅನಗತ್ಯ ವಿಷಯಗಳಲ್ಲಿ ಹಸ್ತಕ್ಷೇಪ ಸಲ್ಲದು. ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ನೀವು ಪಡೆಯಲಿದ್ದೀರಿ. ಕೌಟುಂಬಿಕ ಮತ್ತು ಮನೆಯ ವಿಷಯಗಳನ್ನು ಯಶಸ್ವಿಯಾಗಿ ನಿಭಾಯಿಸಲು ಒಳ್ಳೆಯ ಸಮಯ.

ನಿಮ್ಮ ಆರೋಗ್ಯದ ಬಗ್ಗೆ ಸೂಕ್ತ ಗಮನ ನೀಡಬೇಕಾಗುತ್ತದೆ. ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ತಪ್ಪಿಸಿ. ಆದಾಯವನ್ನು ಮೀರಿ ಖರ್ಚು ಮಾಡಬೇಡಿ.ನಿಮ್ಮ ಆಕಾಂಕ್ಷೆಗಳು ಹೆಚ್ಚಾಗುತ್ತಿರುವುದನ್ನು ಕಾಣುತ್ತೀರಿ.

ಆರೋಗ್ಯ ಉತ್ತಮವಾಗಿರುತ್ತದೆ. ಮುಂಬರುವ ದಿನಗಳಲ್ಲಿ ಆತ್ಮಿಯವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಾಧ್ಯತೆ ಇದೆ. ನಿಮಗೆ ಸಂತಸ ನೀಡುವ ಸುದ್ದಿಗಳು ಬರಲಿವೆ.

ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ಆರೋಗ್ಯ ಹೊಂದಿರುತ್ತೀರಿ. ವ್ಯಾಪಾರ ಕ್ಷೇತ್ರದಲ್ಲಿ ನಿಮಗೆ ಪ್ರತಿಕೂಲವಾಗಿದ್ದ ವಾತಾವರಣ ನಿಧಾನವಾಗಿ ನಿಮಗೆ ಅನುಕೂಲವಾಗಿ ಪರಿಣಮಿಸುತ್ತದೆ.

ನಿಮ್ಮ ಬಾಳಿಗೆ ಸಂತೋಷ ತುಂಬುವ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ. ನಿಮ್ಮ ಯೋಜನೆಗಳಿಗೆ ಸ್ನೇಹಿತರ ನೆರವು ದೊರೆಯುತ್ತದೆ. ನಿಮ್ಮ ಉನ್ನತಾಧಿಕಾರಿ ಅಥವಾ ಅಧಿಕಾರಿಗಳಿಂದ ಬೆಂಬಲ ಬರುತ್ತದೆ.

ಹಿರಿಯರು ಅಥವಾ ಹೆತ್ತವರೊಂದಿಗೆ ವಾಗ್ವಾದಕ್ಕಿಳಿಯಬೇಡಿ.ನೀವು ಹಿಂದೆ ಮಾಡಿದ್ದ ಕಠಿಣ ಶ್ರಮಕ್ಕೆ ಸೂಕ್ತ ಪ್ರತಿಫಲ ಪಡೆಯಲಿದ್ದೀರಿ. ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಆಹಾರ ವಿಷಯಗಳಲ್ಲಿ ಜಾಗ್ರತೆಯಿಂದಿರಿ.

PR
ಮೀನ

ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ನೆಮ್ಮದಿಯ ವಾತಾವರಣ. ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಹಣಕಾಸಿನ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ.

ಇತರರನ್ನು ನಂಬಲು ಹೋಗಬೇಡಿ. ನಿರುದ್ಯೋಗಿಗಳಿಗೆ ನೌಕರಿ ದೊರೆಯುವ ಸಾಧ್ಯತೆಗಳು ಹೆಚ್ಚು. ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಪ್ರೇಮಿಗಳಿಗೆ ಶುಭಯೋಗ.

ವಾಣಿಜ್ಯ ರಂಗದವರಿಗೆ ಉತ್ತಮ ಲಾಭವಾಗಲಿದೆ. ಇತರರನ್ನು ತೆಗಳಬೇಡಿ. ಗೆಳೆಯರಿಂದ ಕಷ್ಟದ ಕಾಲದಲ್ಲಿ ಸಹಾಯ ಸಾಧ್ಯತೆ. ನಿಮ್ಮ ಅನಿಸಿಕೆಗಳನ್ನು ಇತರರ ಮುಂದೆ ಹಂಚಿಕೊಳ್ಳಲು ಹೋಗಬೇಡಿ.

ರಹಸ್ಯ ವಿಷಯಗಳನ್ನು ರಹಸ್ಯವಾಗಿರಲು ಬಿಡಿ. ನೌಕರಿಯಲ್ಲಿ ಬಡ್ತಿ ಸಾಧ್ಯತೆ. ವರ್ಗಾವಣೆ ಯೋಗ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಕೆಲಸದ ಒತ್ತಡ ತಪ್ಪದು. ಮನೆಯಲ್ಲಿ ನೆಮ್ಮದಿಯ ವಾತಾವರಣ.

ವೈದ್ಯರಿಗೆ ಹಾಗೂ ವಕೀಲರಿಗೆ ಉತ್ತಮ ಲಾಭ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಹಿಸುವುದು ಸೂಕ್ತ. ಸ್ತ್ರೀಯರು ಕೋಪದಿಂದ ವರ್ತಿಸಿದಲ್ಲಿ ಹಾನಿಯನ್ನು ತರಲಿದೆ. ಪತಿ ಪತ್ನಿಯಯರಲ್ಲಿ ಸಾಮರಸ್ಯದ ಜೀವನ.

ನಿಮ್ಮದೇ ಆದ ಗೆಳೆಯರ ಬಳಗವನ್ನು ದುತ್ತೀರಿ. ಆರ್ಥಿಕ ವಿಷಯಗಳಲ್ಲಿ ಎಚ್ಚರವಹಿಸುವುದು ಅಗತ್ಯ. ಬಂಗಾರ, ಬೆಳ್ಳಿ, ಕಬ್ಬಿಣ, ಸಿಮೆಂಟ್, ಮರಳು, ರತ್ನ ವ್ಯಾಪಾರಸ್ಥರಿಗೆ ಉತ್ತಮ ಧನಲಾಭ.

ಪ್ರಿಯತಮೆಯ ಬೇಡಿಕೆ ಈಡೇರಿಕೆಗೆ ಖರ್ಚಿನಲ್ಲಿ ಹೆಚ್ಚಳ.ನಿರೀಕ್ಷಿಸಿದಕ್ಕಿಂತ ವೆಚ್ಚದಲ್ಲಿ ಹೆಚ್ಚಳ ಸಾಧ್ಯತೆ. ದೈವ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ನ್ಯಾಯಾಲಯದ ವ್ಯವಹಾರಗಳನ್ನು ಮುಂದಕ್ಕೆ ಹಾಕುವುದು ಸೂಕ್ತ.

ಚಿಕ್ಕ ಪುಟ್ಟ ವಿಷಯಗಳಿಗೆ ಅನಗತ್ಯ ಕೋಪ ಸಲ್ಲದು. ಕೋಪದಿಂದ ವರ್ತಿಸಿದಲ್ಲಿ ಹಾನಿಯಾಗುವ ಸಾಧ್ಯತೆ. ಕ್ರೀಡಾಪಟುಗಳಿಗೆ ಉತ್ತಮಯೋಗ.

ಕಾರ್ಮಿಕರಿಗೆ ಕೆಲಸದ ಒತ್ತಡ ತಪ್ಪದು. ಇತರರ ಜೊತೆ ಹೊಂದಾಣಿಕೆ ಅಗತ್ಯ. ಪ್ರೇಮವಿವಾಹ ಯಶಸ್ವಿಯಾಗುವ ಸಾಧ್ಯತೆಗಳಿವೆ.ಸರಕಾರಿ ನೌಕರರಿಗೆ ಬಡ್ತಿ ದೊರೆಯಲಿದೆ.

ವೆಬ್ದುನಿಯಾವನ್ನು ಓದಿ