7 ತಿಂಗಳ ಗರ್ಭಿಣಿಯಾಗಿದ್ದ ಖಾರ್ಗಾಂವ್ ನಿವಾಸಿ ರಾನು ವರ್ಮಾ ತನ್ನ ಪತಿಯ ಜತೆ ಇಂದೋರ್ನಿಂದ ಸುಜಾಲ್ಪುರ್ಗೆ ಹೋಗುವವರಿದ್ದು, ಪಂಚವಳಿ ಎಕ್ಸಪ್ರೆಸ್ ಏರಿ ಅವರಿಬ್ಬರು ಕುಳಿತಿದ್ದರು. ರೈಲು ಹೊರಡಲು ಕೆಲವೇ ಕ್ಷಣಗಳು ಇರುವಾಗ ರಾನುಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಅದು ಪ್ರಸವ ವೇದನೆಯೆಂದು ತಿಳಿಯದೇ ರಾನು ಶೌಚಾಲಯಕ್ಕೆ ತೆರಳಿದ್ದಾಳೆ. ಅಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ತಕ್ಷಣ ಆಕೆ ಸಹಾಯಕ್ಕಾಗಿ ಕೂಗಿ ಕೊಂಡಿದ್ದಾಳೆ. ಆದರೆ ಮಗು ಶೌಚಾಲಯದ ರಂಧ್ರದಿಂದ ಹಳಿಯ ಮೇಲೆ ಉರುಳಿದೆ.