ಬಿಜೆಪಿಯದ್ದು ಕ್ಷುಲ್ಲಕ ಚಾಳಿ ಎಂದು ಜರಿದ ಸಚಿವ

ಸೋಮವಾರ, 15 ಏಪ್ರಿಲ್ 2019 (17:29 IST)
ಸೇನೆಯ ವಿಚಾರವನ್ನು ಇಷ್ಟು ವರ್ಷಗಳ ಇತಿಹಾಸದಲ್ಲಿ ಎಂದೂ ರಾಜಕೀಯ ಅಸ್ತ್ರವಾಗಿ ಯಾರೂ ಬಳಸಿರಲಿಲ್ಲ.
ಆದರೆ ಬಿಜೆಪಿಯವರು ಸೇನೆಯ ವಿಚಾರವನ್ನೇ ಇಟ್ಟುಕೊಂಡು ರಾಜಕೀಯ ಮಾಡ್ತಿದ್ದಾರೆ. ಹೀಗಂತ ಸಚಿವ ಹಾಗೂ ಕೈ ಪಾಳೆಯದ ಅಭ್ಯರ್ಥಿ ಟೀಕೆ ಮಾಡಿದ್ದಾರೆ.

ಸೈನಿಕರ ಹೆಸರಲ್ಲಿ ಬಿಜೆಪಿ ಮತ ಕೇಳೋದು ಸರಿಯಲ್ಲ. ಮಿಲಿಟರಿಯನ್ನ ಚುನಾವಣಾ ಅಸ್ತ್ರವಾಗಿ ಬಳಸಬಾರದು. ಸೈನಿಕರ ತ್ಯಾಗ, ಬಲಿದಾನವನ್ನ ಬಿಜೆಪಿ ಬಳಕೆ ಮಾಡ್ತಿರೋದು ಸರಿಯಲ್ಲ. ಬಲಿದಾನವಾಗಿರೋದು ಸೈನಿಕರೇ ಹೊರತು ಬಿಜೆಪಿಯವರಲ್ಲ. ಹೀಗಂತ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ ಹೇಳಿಕೆ ನೀಡಿದ್ದಾರೆ.

ಮೋದಿ ಪ್ರಧಾನಿ ಆದ್ರೆ ಒಳ್ಳೇದು ಅಂತ ಇಮ್ರಾನ್ ಖಾನ್ ಹೇಳ್ತಾರೆ. ಪಾಕಿಸ್ತಾನದ ಪ್ರಧಾನಿ ಮೋದಿಯನ್ನ ಬೆಂಬಲಿಸ್ತಾರೆ ಅಂದ್ರೆ ಜನ ಇದ್ರಲ್ಲೇ ಅರ್ಥ ಮಾಡಿಕೊಳ್ಳಬೇಕು ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ