ಎಲ್ಲಾ ಸರಿ ಹೋದ್ರೆ...!: ಪ್ರಧಾನಿ ಪಟ್ಟದ ಬಗ್ಗೆ ಪರೋಕ್ಷ ಸುಳಿವು ಕೊಟ್ಟ ಮಾಯಾವತಿ ಸುಳಿವು

ಮಂಗಳವಾರ, 7 ಮೇ 2019 (08:00 IST)
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಫಲಿತಾಂಶ ಏನಾಗುತ್ತೋ ಬಿಡುತ್ತೋ.. ಆದರೆ ಪ್ರಧಾನಿ ಪಟ್ಟದ ಮೇಲೆ ಹಲವು ನಾಯಕರು ಕಣ್ಣಿಟ್ಟಿದ್ದಾರೆ.


ಲೋಕಸಭೆ ಚುನಾವಣೆಯಲ್ಲಿ ಒಂದು ವೇಳೆ ತಮ್ಮ ಪಕ್ಷ ಗೆದ್ದರೆ ತಾವೇ ಪ್ರಧಾನಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳುತ್ತಿದ್ದರೆ, ಇನ್ನೊಂದೆಡೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವ ಭರವಸೆಯಲ್ಲಿದ್ದಾರೆ. ಅತ್ತ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಕೂಡಾ ತಾನೂ ಅಭ್ಯರ್ಥಿ ಎಂಬ ಸುಳಿವು ನೀಡಿದ್ದಾರೆ.

ಇದೆಲ್ಲದರ ನಡುವೆ ಬಿಎಸ್ ಪಿ ನಾಯಕಿ ಮಮತಾ ಬ್ಯಾನರ್ಜಿ ತಾವೂ ಪ್ರಧಾನಿ ಪಟ್ಟದ ಆಕಾಂಕ್ಷಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ‘ಎಲ್ಲಾ ಸರಿ ಹೋದ್ರೆ ನಾನು ಇಲ್ಲಿಂದಲೇ ಚುನಾವಣೆ ಎದುರಿಸಬೇಕಾದೀತು. ಯಾಕೆಂದರೆ ರಾಷ್ಟ್ರೀಯ ರಾಜಕಾರಣ ಅಂಬೇಡ್ಕರ್ ನಗರದ ಮೂಲಕವೇ ಸಾಗುತ್ತದೆ’ ಎಂದು ಪರೋಕ್ಷವಾಗಿ ರಾಷ್ಟ್ರ ರಾಜಕಾರಣಕ್ಕೆ ಬರುವ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ