ಸಿದ್ದರಾಮಯ್ಯನವ್ರೇ ಕೆಲಸ ಮಾಡಲು ಆಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಿ- ಶೋಭಾ ಕರಂದ್ಲಾಜೆ ವಾಗ್ದಾಳಿ

ಗುರುವಾರ, 16 ಮೇ 2019 (11:14 IST)
ಹುಬ್ಬಳ್ಳಿ : ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಿ ಎಂದು ಸಿದ್ದರಾಮಯ್ಯ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.




ಸಿದ್ದರಾಮಯ್ಯ ನವ್ರು ಬಲಹೀನರು, ಸಿಎಂ ಕನಸು ಕಾಣ್ತಿದ್ದಾರೆ. ಅರಸು ಅವರನ್ನ ಹೋಲಿಸಿಕೊಳ್ಳುವ ನೈತಿಕತೆ ಅವರಿಗೆ ಇಲ್ಲ. ಕೈಲಾಗದವರು ಮೈಪರಚಿಕೊಂಡ್ರು ಎನ್ನುವ ಸ್ಥಿತಿಯಲ್ಲಿದ್ದಾರೆ. ಸಿಎಂ ಆಗಲು ಶಾಸಕರನ್ನ ಸಿದ್ದರಾಮಯ್ಯ ಬಡಿದೆಬ್ಬಿಸುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.


ಡಿಕೆಶಿ ಕಮಿಷನ್ ಹಣದ ಚೀಲ ತೆಗೆದುಕೊಂಡು ಹೋಗ್ತಾರೆ. ಹೀಗಾಗಿ ಕುಂದಗೋಳಕ್ಕೆ ಡಿಕೆಶಿಯನ್ನ ಉಸ್ತುವಾರಿ ಮಾಡಿದ್ದು ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ