ಕೆಲಸ ಮಾಡಿಲ್ಲಾಂದ್ರೆ ಪುತ್ರನ ಬಟ್ಟೆ ಕಿತ್ತಾಕಿ ಕ್ಲಾಸ್ ತಗೊಳ್ಳಿ ಎಂದ ಮಧ್ಯಪ್ರದೇಶ ಸಿಎಂ

ಭಾನುವಾರ, 21 ಏಪ್ರಿಲ್ 2019 (14:26 IST)
ನವದೆಹಲಿ: ನನ್ನ ಮಗ ಏನಾದರೂ ಕೆಲಸ ಮಾಡಿಲ್ಲಾಂದ್ರೆ ಸುಮ್ನಿರ್ಬೇಡಿ. ಅವನ ಬಟ್ಟೆ ಕಿತ್ತು ಹಾಕಿ, ಚೆನ್ನಾಗಿ ಕ್ಲಾಸ್ ತಗೊಳ್ಳಿ ಎಂದು ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಮತದಾರರಿಗೆ ಕರೆಕೊಟ್ಟಿದ್ದಾರೆ.


ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಕಮಲ್ ನಾಥ್ ಪುತ್ರ ನಕುಲ್ ನನ್ನ ಮಗ ಕೆಲಸ ಮಾಡಿಲ್ಲಾಂದ್ರೆ ಸರಿಯಾಗಿಯೇ ವಿಚಾರಿಸಿಕೊಳ್ಳಿ ಎಂದಿದ್ದಾರೆ.

ಛಿನ್ ದ್ವಾರಾ ಕ್ಷೇತ್ರದಿಂದ ನಕುಲ್ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ನಕುಲ್ ನಿಮ್ಮ ಸೇವೆಗೆಂದೇ ಇಲ್ಲಿ ಚುನಾವಣೆಗೆ ನಿಂತಿದ್ದಾರೆ. ಆದರೆ ನಿಮ್ಮ ಬೇಡಿಕೆಗಳು ಈಡೇರದಿದ್ದರೆ ಅವನನ್ನು ಸುಮ್ಮನೇ ಕೂರಲು ಬಿಡಬೇಡಿ ಎಂದು ಕಮಲ್ ನಾಥ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ