ನಿಖಿಲ್‌ ಗೆಲ್ತಾರ? ಸುಮಲತಾ ಗೆಲ್ತಾರ?; ಲಕ್ಷ ಲಕ್ಷ ಹಣ, ಜಮೀನು ಬೆಟ್ಟಿಂಗ್‌ ಕಟ್ಟಿದ ಮಂಡ್ಯ ಜನತೆ

ಶುಕ್ರವಾರ, 19 ಏಪ್ರಿಲ್ 2019 (11:01 IST)
ಮಂಡ್ಯ : ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಹೈವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿ ಮತದಾನ ಮುಗಿದಿದೆ. ಆದರೆ ಇದೀಗ ಮಂಡ್ಯದಲ್ಲಿ ಯಾರು ಗೆಲ್ತಾರೆ ಎಂಬ ಲೆಕ್ಕಾಚಾರ ಶುರುವಾಗಿದೆ.


ಹೌದು. ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್ ಹಾಗೂ ದಿ. ಅಂಬರೀಶ್ ಅವರ ಪತ್ನಿ ಸುಮಲತಾ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದರಿಂದ ಈ ಬಾರಿ ಮಂಡ್ಯ ಕ್ಷೇತ್ರದ  ಕಣ ರಂಗೇರಿತ್ತು. ದಿನದಿನಕ್ಕೆ ಒಂದಲ್ಲಾ ಒಂದು ಸುದ್ದಿಯಿಂದ ಸಖತ್ ಸದ್ದು ಮಾಡುತ್ತಿತ್ತು.


ಆದರೆ ಇದೀಗ ಮತದಾನ ಮುಗಿದ ನಂತರೂ ಮಂಡ್ಯದ ಅಖಾಡದಲ್ಲಿ ಯಾರು ಗೆಲ್ತಾರೆ ಎಂಬ ಬೆಟ್ಟಿಂಗ್‌ ಶುರುವಾಗಿದೆ. ನಿಖಿಲ್‌ ಗೆಲ್ತಾರ? ಸುಮಲತಾ ಗೆಲ್ತಾರ? ಎಂದು ಅಲ್ಲಿನವರು ಲಕ್ಷ ಲಕ್ಷ ಹಣ, ಜಮೀನು ಬೆಟ್ಟಿಂಗ್‌ ಕಟ್ಟಿದ್ದಾರೆ ಎನ್ನಲಾಗಿದೆ. ಮಂಡ್ಯದಲ್ಲಿ ಅಟೋ ಚಾಲಕನೊಬ್ಬ ಮೂರು ಲಕ್ಷ ಬೆಟ್ಟಿಂಗ್‌ ಕಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸದ್ದು ಮಾಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ