Pakistan PM Sharif: ಪ್ರತಿ ರಕ್ತದ ಹನಿಗೂ ನಾವು ಸೇಡು ತಿರಿಸಿಕೊಳ್ತೇವೆ: ಪಾಕಿಸ್ತಾನದ ಪ್ರಧಾನಿ ಶೆಹಬಾಜ್
ನಿನ್ನೆ ತಡರಾತ್ರಿ ಭಾರತದ ಯುದ್ಧ ವಿಮಾನಗಳು ಆಪರೇಷನ್ ಸಿಂದೂರ್ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತ್ತು. ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಕೊಂದ ಉಗ್ರರ ಮೇಲೆ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು.
ತನ್ನ ನೆಲದ ಮೇಲೆ ಭಾರತ ದಾಳಿ ನಡೆಸಿ ಉಗ್ರರನ್ನು ಕೊಂದ ಬೆನ್ನಲ್ಲೇ ಪಾಕಿಸ್ತಾನ ಅಂಡು ಸುಟ್ಟ ಬೆಕ್ಕಿನಂತೆ ಆಡುತ್ತಿದೆ. ದೇಶವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಶಹಬಾಜ್ ಷರೀಫ್ ನಮ್ಮ ಪ್ರತೀ ರಕ್ತ ಹನಿಗೂ ಸೇಡು ತೀರಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಸೇನೆಗೆ ಪರಮಾಧಿಕಾರ ನೀಡಲಾಗಿದೆ. ಭಾರತ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಕೊನೆಯುಸಿರುವವರೆಗೂ ನಾವು ದೇಶದ ಉಳಿವಿಗಾಗಿ ಹೊರಾಡಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.