ಟಿಪ್ಪು ಸುಲ್ತಾನ್ ವಿಚಾರ ಪ್ರಸ್ತಾಪಿಸಿ ಕರ್ನಾಟಕದ ರಾಜಕೀಯಕ್ಕೆ ಕಿಚ್ಚು ಹಚ್ಚಿದ ಪಾಕಿಸ್ತಾನ!

ಶನಿವಾರ, 5 ಮೇ 2018 (08:08 IST)
ನವದೆಹಲಿ: ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ವಿಚಾರವಾಗಿ ರಾಜಕೀಯ ಪಕ್ಷಗಳು ಕೆಸರೆರಚಾಟ ಮಾಡುತ್ತಿವೆ. ಇದಕ್ಕೆ ಇದೀಗ ನೆರೆಯ ಪಾಕಿಸ್ತಾನ ಕಿಚ್ಚು ಹಚ್ಚಿಸಿದೆ.
 

ಟಿಪ್ಪು ಸುಲ್ತಾನ್ ನ್ನು ಮೈಸೂರಿನ ಹುಲಿ ಎಂದು ಕರೆದಿರುವ ಪಾಕಿಸ್ತಾನ ಕರ್ನಾಟಕ ರಾಜಕಾರಣಿಗಳಿಗೆ ಆಡಿಕೊಳ್ಳಲು ಹೊಸ ಅಸ್ತ್ರ ಸಿಗುವಂತೆ ಮಾಡಿದೆ.

ಇದೀಗ ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದು, ಪಾಕಿಸ್ತಾನಕ್ಕೆ ತಿರುಗೇಟು ಕೊಡುವುದರ ಜತೆಗೆ ಪಾಕ್ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಸಹಾಯ ಮಾಡುತ್ತಿದೆ ಎಂದು ವ್ಯಂಗ್ಯವಾಡಿದೆ.  ಟಿಪ್ಪು ಜಯಂತಿ ಆಚರಣೆ ವಿಚಾರವಾಗಿಯೇ ಬಿಜೆಪಿ ಕಾಂಗ್ರೆಸ್ ಮೇಲೆ ಭಾರೀ ಟೀಕಾ ಪ್ರಹಾರ ನಡೆಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ