ಭಾರತದಲ್ಲಿ ಪಾಟ್ಸಪ್ ಜಾಲತಾಣವನ್ನು ನಿಷೇಧಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸುಧೀರ್ ಯಾದವ್, ಭಾರತದಲ್ಲಿ ಉಗ್ರಗಾಮಿಗಳು ಮತ್ತು ಕ್ರಿಮಿನಲ್ಗಳು ವಾಟ್ಸಪ್ ಮೂಲಕ ಸುರಕ್ಷಿತವಾಗಿ ಸಂಭಾಷಣೆ ನಡೆಸುತ್ತಿದ್ದು, ದೇಶದ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ಆದರೆ, ವಾಟ್ಸಪ್ ಸಂಭಾಷಣೆ ಕುರಿತು ಭಾರತದ ಗುಪ್ತಚರ ಸಂಸ್ಥೆಗಳಿಗೆ ಯಾವುದೇ ಮಾಹಿತಿಗಳು ಲಭ್ಯವಾಗುವುದಿಲ್ಲ. ದೇಶದ ಭದ್ರತೆ ದೃಷ್ಟಿಯಿಂದ ವಾಟ್ಸಪ್ ನಿಷೇಧಿಸಬೇಕೆಂದು ತಿಳಿಸಿದ್ದಾರೆ.