ಅಂದು ಬಸವಣ್ಣ .. ಆಮೇಲೆ ಸಿಂಬಲ್, ಇಂದು ಶಿವಂ ಇದು ಉಪ್ಪಿ ಸಿನಿಮಾ ಕಥೆ

ಸೋಮವಾರ, 17 ನವೆಂಬರ್ 2014 (11:33 IST)
ಅಂತೂ ಇಂತೂ ಈ ಚಿತ್ರಕ್ಕೊಂದು ಟೈಟಲ್ ಸಿಕ್ಕಿದೆ. ನಿರ್ಮಾಪಕ ಸಿ ಆರ್ ಮನೋಹರ್ ಅವರ ನಿರ್ಮಾಣದ  ಶ್ರೀನಿವಾಸ ರಾಜು ಅವರ ನಿರ್ದೇಶನದ ಮತ್ತು ಉಪೇಂದ್ರ ಅವರ ನಟನೆಯ ಚಿತ್ರಕ್ಕೆ ಟೈಟಲ್ ಸಿಗೋದು ತುಂಬಾ ಕಷ್ಟ ಆಗಿತ್ತು. ಆದರೆ ಈಗ ಆ ಚಿತ್ರಕ್ಕೊಂದು ಶೀರ್ಷಿಕೆ ಸಿಕ್ಕಿದೆ. ಅದರ ಹೆಸರು ಶಿವಂ ಎಂದಾಗಿದೆ. ಅಂತೂ ಇಂತೂ ಚಿತ್ರದ ವಿವಾದ ದೂರಾಗಿದೆ. ಆರಂಭದಲ್ಲಿ ಬ್ರಾಹ್ಮಣ ಎನ್ನುವ ಟೈಟಲ್ ಪಡೆದು ಆನಂತರ ಅದು ಬಸವಣ್ಣ ಎಂದಾಗಿ ಅದಾದ ಬಳಿಕ ಆ ಚಿತ್ರವೂ ಶೀರ್ಷಿಕೆ ರಹಿತವಾಯ್ತು.

ಈಗ ಅದ್ಯಾವುದು ಬೇಡ ಎಂದು ಶ್ರೀನಿವಾಸ ರಾಜು ಮತ್ತೇ ಬಸವಣ್ಣ ಎನ್ನುವ ಹೆಸರೇ ಇಡಲು ನಿರ್ಧರಿಸಿದರು ಅದಕ್ಕೆ ಕಾರಣ ನಾಮದ ಚಿತ್ರ , ಉಪ್ಪಿ ಮೂರು ನಾಮದ ಸಿನಿಮಾ ಹೀಗೆ ಅನೇಕ ರೀತಿ ಜನರು ಕರೆಯುವುದರಿಂದ ಅದರ ಬಗ್ಗೆ ಕೆಟ್ಟ ಪ್ರಚಾರ ಆದಂತಾಗುತ್ತದೆ ಎಂದು ತಿಳಿದ ನಿರ್ದೇಶಕರು ಅಂತಿಮವಾಗಿ ಬಸವಣ್ಣ ಅಂತ ಮತ್ತೆ ಕರೆದರೂ ಅದು ವಿವಾದ ಉಂಟು ಮಾಡಿತ್ತು ಮತ್ತೆ.

ಈಗ ಅಂತಿಮವಾಗಿ ಈ ಚಿತ್ರಕ್ಕೆ ಶಿವಂ ಎನ್ನುವ ಹೆಸರು ಬಂದಿದೆ. ಚಿತ್ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದಾರೆ. ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆ ರಾಗಿಣಿ ದ್ವಿವೇದಿ, ಸಲೋನಿ ಮುಂತಾದವರು ನಟಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ