ಅಂದು ರಂಜಿತಾ ಇಂದು ಆನಂದಮಯಿ ಮುಂದೆ ??

ಭಾನುವಾರ, 29 ಡಿಸೆಂಬರ್ 2013 (10:43 IST)
PR
ವಿಶ್ವದೆಲ್ಲೆಡೆ ತನ್ನ ರಾಸಲೀಲೆಯಿಂದ ಹೆಚ್ಚು ಜನಕ್ಕೆ ಗೊತ್ತಾದ ಸ್ವಾಮಿ ನಿತ್ಯಾನಂದ. ಆತನ ಜೊತೆಗೆ ಹೆಚ್ಚಿನ ಜನಕ್ಕೆ ತಿಳಿದ ನಟಿ ರಂಜಿತ. ಚಲನಚಿತ್ರಗಳಲ್ಲಿ ಕನ್ನಡ ಯಶಸ್ಸು ಆಕೆ ಒಂದು ವಿಡಿಯೋದಿಂದ ಕಂಡಿದ್ದು ಮಾತ್ರ ಯಾರೂ ಮರೆಯದಂತಹ ನಿಚ್ಚಳ ಸತ್ಯ. ಈಗ ಮತ್ತೆ ಸುದ್ದಿಯಾಗಿದ್ದಾಳೆ ರಂಜಿತಾ. ತನ್ನ ಹೊಸ ರೂಪದ ಮೂಲಕ ಆಕೆ ಮತ್ತೆ ಜನರ ಮುಂದೆ ಬಂದಿದ್ದಾಳೆ.

ಬೆಂಗಳೂರಿನ ಬಿಡದಿ ಸಮೀಪದ ಧ್ಯಾನಪೀಠಂ ನಲ್ಲಿ ಆಕೆ ದೀಕ್ಷೆ ತೆಗೆದುಕೊಂಡಿದ್ದಾಳೆ. ಇನ್ನು ಮುಂದೆ ನಾವ್ಯಾರು ಆಕೆಯನ್ನು ಹಾಟ್ ರಂಜಿತ ಎಂದು ಸಂಬೋಧನೆ ಮಾಡುವಂತಿಲ್ಲ! ಯಾಕೆಂದರೆ ಆಕೆ ಈಗ ಸನ್ಯಾಸಿನಿಯಾಗಿ ಬದಲಾಗಿದ್ದಾರೆ.

ಇನ್ನುಮುಂದೆ ತಾನು ಸ್ವಾಮಿ ಸಮಕ್ಷಮದಲ್ಲಿ ಬದುಕನ್ನು ಕಳೆಯುತ್ತೇನೆ ಎಂದು ಹೇಳಿದ್ದಲ್ಲದೆ ಇನ್ನು ಮುಂದೆ ತನ್ನ ಹೆಸರನ್ನು ರಂಜಿತಾ ಎಂದು ಕರೆಯಿರಿ ಎಂದು ಅಲವತ್ತುಕೊಂಡಿದ್ದಾಳೆ ಆಕೆ.

ವೆಬ್ದುನಿಯಾವನ್ನು ಓದಿ