ಅಂದು ಶತ್ರಗಳು ಇಂದು ಮಿತ್ರರು.. ಇದು ರೀಲ್ ಅಲ್ಲ ರಿಯಲ್!

ಶನಿವಾರ, 30 ನವೆಂಬರ್ 2013 (10:29 IST)
PR
ಕನ್ನಡ ಚಿತ್ರರಂಗದ ಎರಡು ಪ್ರತಿಭೆಗಳು ಮತ್ತೇ ಒಂದಾಗಿವೆ. ಇಬ್ಬರೂ ಒಂದೇ ಸಿನಿಮಾ ಯೂನಿಟ್ ನಲ್ಲಿ ಕೆಲಸ ಮಾಡಿ ಅದಾದ ಬಳಿಕ ಒಬ್ಬರಮೇಲೆ ಒಬ್ಬರು ಕಾರಣ ಒಂದಕ್ಕೆ ಸಿಟ್ಟಾಗಿ ಶರಂಪರ ಜಗಳವಾಡಿ ಟೂ ಬಿಟ್ಟು ಬಿಟ್ಟಿದ್ದರು. ಆದರೇ ಈ ಜೋಡಿ ಪುನಃ ಸೇ ಬಿಟ್ಟು ಒಂದಾಗಿದ್ದಾರೆ. ಆ ಎರಡು ಪ್ರತಿಭೆಗಳೇ ನಿರ್ದೇಶಕ-ನಟ ಎಸ್. ನಾರಾಯಣ್ ಮತ್ತು , ನಟ ದುನಿಯಾ ವಿಜಯ್. ಅವರು ಕುಪ್ಪುಸ್ವಾಮಿ ನಿರ್ಮಿಸುತ್ತಿರುವ ಚಿತ್ರ ಒಂದರಲ್ಲಿ ಒಟ್ಟಾಗಿ ಕೆಲಸ ಮಾಡಲು ನಿರ್ಧಾರ ಮಾಡಿದ್ದಾರೆ. ಚಂಡ ಸಿನಿಮಾಗೆ ಸಂಬಂಧಪಟ್ಟಂತೆ ಇವರು ಮಾಡಿಕೊಂಡ ಗಲಾಟೆಯನ್ನು ಫಿಲಂ ಚೇಂಬರ್ ಬಗೆ ಹರಿಸಿತ್ತು. ಆ ಬಳಿಕ ಇಬ್ಬರೂ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಆದರೇ ಮತ್ತೇ ಒಂದಾಗಿದ್ದಾರೆ. ಈ ಚಿತ್ರಕ್ಕೆ ಬಹು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಲಾಗುತ್ತಿದೆ.

ಪ್ರಸ್ತುತ ದುನಿಯಾ ವಿಜಯ್ ರಿಂಗ್ ರೋಡ್ ಶುಭಾ, ಶಿವಾಜಿನಗರ ಚಿತ್ರಗಳ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಅಂತೂ ಕುಪ್ಪು ಸ್ವಾಮಿ ಕನ್ನಡದ ಎಣ್ಣೆ ಸೀಗೆ ಕಾಯಿಯನ್ನು ಒಂದು ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಸೀಗೆಕಾಯಿ ಧೂಳು ಮತ್ತು ಎಣ್ಣೆ ಯಿಂದ ಅವರ ಕಣ್ಣು ರಕ್ಷಣೆ ಹೊಂದಲಿ.

ವೆಬ್ದುನಿಯಾವನ್ನು ಓದಿ