ಅಂಬಿ ಆರೋಗ್ಯದಲ್ಲಿ ಚೇತರಿಕೆ ಹೆಚ್ಚಿನ ಚಿಕಿತ್ಸೆ ಗಾಗಿ ಸಿಂಗಪೂರ್ಗೆ ಹೊರಟ ರೆಬೆಲ್ ಸ್ಟಾರ್ ...ಗೆಟ್ ವೆಲ್ ಸೂನ್ ಅಂಬಿಯಣ್ಣ

ಶನಿವಾರ, 1 ಮಾರ್ಚ್ 2014 (10:03 IST)
PR
ನಗರದ ವಿಕ್ರಮ್ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಇಂದು ಮುಂಜಾನೆ 4.30ಸಮಯದಲ್ಲಿ ವಿಶೇಷವಾದ ವಿಮಾನದಲ್ಲಿ ಅವರನ್ನು ಕರೆದೊಯ್ಯಲಾಯಿತು. ಕಳೆದವಾರದಿಂದ ಅವರನ್ನು ವಿಕ್ರಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಐಸಿಯುನಲ್ಲಿ ಇಡಲಾಗಿತ್ತು.

ಅವರ ಆರೋಗ್ಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡ ಕಾರಣ ಅವರನ್ನು ಸಿಂಗಪೂರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೂಪರ್ ಸ್ಟಾರ್ ರಜನಿಕಾಂತ್ ಅವರು ನೀಡಿದ್ದ ಸಲಹೆಯ ಮೇರೆಗೆ ಈ ನಿರ್ಧಾರವನ್ನು ಅವರ ಕುಟುಂಬದವರು ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರ ಜೊತೆ ಅಂಬಿ ಪತ್ನಿ ಸುಮಲತಾ ಮತ್ತು ಮಗ ಅಭಿಷೇಕ್ ಮತ್ತು ಬೆಂಗಳೂರಿನ ಇಬ್ಬರು ವೈದ್ಯರು ಅವರ ಜೊತೆ ಹೋಗಿದ್ದಾರೆ. ಕಳೆದ ವರ್ಷ

ರಜನಿಕಾಂತ್ ಅವರ ದೇಹಾರೋಗ್ಯ ಸರಿ ಇಲ್ಲದ ಸಮಯದಲ್ಲಿ ಅವರನ್ನು ಸಹ ಸಿಂಗಪೂರ್ ನಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಡಾ.ಸತೀಶ್ ಮತ್ತು ಡಾ. ರಘುನಂದನ್ ಅವರು ಅಂಬರೀಶ್ ಅವರ ಜೊತೆಗೆ ಹೋಗಿರುವ ತಜ್ಞ ವೈದ್ಯರಾಗಿದ್ದಾರೆ. ಎಲ್ಲರ ಪ್ರೀತಿಯ ಅಂಬಿ ಶೀಘ್ರವಾಗಿ ಗುಣಮುಖರಾಗಿ ಬರಲಿ ಎನ್ನುವ ಶುಭ ಹಾರೈಕೆ ವೆಬ್ ದುನಿಯಾ ಪತ್ರಿಕೆಯದ್ದಾಗಿದೆ.. ಗೆಟ್ ವೆಲ್ ಸೂನ್ ಅಂಬಿಯಣ್ಣ !

ವೆಬ್ದುನಿಯಾವನ್ನು ಓದಿ